Advertisement

ಹಾರ್ದಿಕ್‌-ರಾಹುಲ್‌ಗೆ ಬಿಸಿಸಿಐ ನೋಟಿಸ್‌

08:55 PM Apr 01, 2019 | Team Udayavani |

ನವದೆಹಲಿ: ಕಾಫಿ ವಿತ್‌ ಕರಣ್‌ ಟೀವಿ ಶೋನಲ್ಲಿ ಭಾಗವಹಿಸಿ, ಭಾರೀ ವಿವಾದ ಮಾಡಿಕೊಂಡು ಕೆಲ ಪಂದ್ಯಗಳ ಮಟ್ಟಿಗೆ ನಿಷೇಧಕ್ಕೊಳಗಾಗಿದ್ದ ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌ಗೆ ಬಿಸಿಸಿಐ ವಿಶೇಷ ತನಿಖಾಧಿಕಾರಿ ಡಿ.ಕೆ.ಜೈನ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಇಬ್ಬರೂ ಏ.10ಕ್ಕೆ ಮುನ್ನ ಜೈನ್‌ ಮುಂದೆ ಹಾಜರಾಗುವ ನಿರೀಕ್ಷೆಯಿದೆ. ಅದೇ ದಿನ ಮುಂಬೈನಲ್ಲಿ ರಾಹುಲ್‌ ಇರುವ ಪಂಜಾಬ್‌ ಹಾಗೂ ಹಾರ್ದಿಕ್‌ ಇರುವ ಮುಂಬೈ ನಡುವೆ ಐಪಿಎಲ್‌ ಪಂದ್ಯವಿದೆ.

Advertisement

ಐಪಿಎಲ್‌ನ ಬಿಗಿಯಾದ ವೇಳಾಪಟ್ಟಿ ನಡುವೆ ಇಬ್ಬರೂ, ಯಾವಾಗ ವಿಚಾರಣೆಗೆ ಹಾಜರಾಗಬೇಕೆನ್ನುವುದು ಸದ್ಯದ ಬಹುಮುಖ್ಯ ಪ್ರಶ್ನೆ. ಈ ಇಬ್ಬರು ತಮ್ಮ ಪ್ರತಿನಿಧಿಗಳನ್ನು ಕಳುಹಿಸದೇ, ವೈಯಕ್ತಿಕವಾಗಿಯೇ ಹಾಜರಾಗಬೇಕೆಂದು ಸೂಚಿಸಲಾಗಿದೆ. ಆದ್ದರಿಂದ ಸಮಯ ಹೊಂದಿಸುವುದು ಕಷ್ಟದ ಕೆಲಸವಾಗಿದೆ.

ಈ ಬಗ್ಗೆ ಮಾತನಾಡಿದ ಡಿ.ಕೆ.ಜೈನ್‌, ಪ್ರಜಾಪ್ರಭುತ್ವದ ನಿಯಮಗಳಿಗೆ ಅನುಗುಣವಾಗಿ ಇಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸೂಚಿಸಲಾಗಿದೆ. ಅದಾದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಜೈನ್‌ ತಿಳಿಸಿದ್ದಾರೆ. ಇದೇ ವೇಳೆ ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷನಾಗಿದ್ದರೂ, ಡೆಲ್ಲಿ ಕ್ಯಾಪಿಟಲ್ಸ್‌ ಸಲಹೆಗಾರರಾಗಿರುವ ಸೌರವ್‌ ಗಂಗೂಲಿಯ ಸ್ವಹಿತಾಸಕ್ತಿ ವಿವಾದದ ಬಗ್ಗೆಯೂ ಜೈನ್‌ ವಿಚಾರಣೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next