Advertisement

ಇಂದು ಬಿಸಿಸಿಐ “ಬದಲಾವಣೆ’ಸಭೆ

01:16 AM Dec 01, 2019 | Team Udayavani |

ಮುಂಬಯಿ: ಸೌರವ್‌ ಗಂಗೂಲಿ ಅಧ್ಯಕ್ಷರಾದ ಅನಂತರ ಮೊದಲ ಬಿಸಿಸಿಐ ಸರ್ವಸದಸ್ಯರ ಸಭೆ ರವಿವಾರ ಮುಂಬಯಿಯಲ್ಲಿ ನಡೆಯಲಿದೆ.

Advertisement

ಈ ಸಭೆಯಲ್ಲಿ ಹಲವು ಮಹತ್ವದ ಸಂಗತಿಗಳ ಚರ್ಚೆಯಾಗಲಿದೆ. ಮುಖ್ಯವಾಗಿ ಬಿಸಿಸಿಐ ಅಳವಡಿಸಿಕೊಂಡಿರುವ ನೂತನ ಸಂವಿಧಾನದಲ್ಲಿ ಪ್ರಮುಖ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಕಡ್ಡಾಯ ವಿಶ್ರಾಂತಿ, ಸ್ವಹಿತಾಸಕ್ತಿ, ಐಸಿಸಿ ಪ್ರತಿನಿಧಿ ಆಯ್ಕೆ ನಿಯಮಗಳ ಮಾರ್ಪಾಡು, ಉನ್ನತ ಸಲಹಾ ಸಮಿತಿ ಆಯ್ಕೆ ಗಳೆಲ್ಲ ಈ ಸಭೆಯ ಮುಖ್ಯ ಕಾರ್ಯಕಲಾಪಗಳಲ್ಲಿ ಸೇರಿವೆ.

ಈ ಸಭೆಯಲ್ಲಿ 4ರಲ್ಲಿ 3ರಷ್ಟು ಬಹುಮತ ಬಂದರೆ ಹೊಸ ಬದಲಾವಣೆಗಳು ಸ್ವೀಕೃತಗೊಳ್ಳಲಿವೆ. ಅನಂತರ ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕು.

ಸ್ವಾರಸ್ಯವೆಂದರೆ, ಸರ್ವೋಚ್ಚ ನ್ಯಾಯಾಲಯದ ಅಂತಿಮ ಒಪ್ಪಿಗೆ ಬೇಕು ಎಂಬ ನಿಯಮವನ್ನೂ ಬದಲಿಸಲು ಬಿಸಿಸಿಐ ತೀರ್ಮಾನಿಸಿದೆ. ಪ್ರತಿಯೊಂದಕ್ಕೂ ನ್ಯಾಯಾಲಯದ ಮೊರೆ ಹೋಗುವುದು ಸಾಧುವಲ್ಲ ಎನ್ನುವುದು ಹೊಸ ಆಡಳಿತ ಮಂಡಳಿಯ ವಾದ.

ಗಂಗೂಲಿ, ಜಯ್‌ ಶಾಗೆ ಲಾಭ
ನಿಯಮಗಳ ಬದಲಾವಣೆಯಿಂದ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ, ಜಯ್‌ ಶಾ ಕಾರ್ಯದರ್ಶಿಯಾಗಿ ಮುಂದುವರಿಯಲು ಅನುಕೂಲವಾಗಲಿದೆ. ಇಲ್ಲವಾದರೆ ಮುಂದಿನ 7-8 ತಿಂಗಳಲ್ಲಿ ಕಡ್ಡಾಯ ವಿಶ್ರಾಂತಿ ನಿಯಮದಡಿ ಅವರು ಅಧಿಕಾರ ತ್ಯಜಿಸುವುದು ಖಚಿತ. ಇವರು ಬಿಸಿಸಿಐ ಅಧಿಕಾರ ಸ್ವೀಕರಿಸುವಾಗ, ತಮ್ಮ ರಾಜ್ಯ ಸಂಸ್ಥೆಗಳಲ್ಲಿ 5 ವರ್ಷ, 3 ತಿಂಗಳು ಅಧಿಕಾರ ನಡೆಸಿದ್ದರು. ಆದ್ದರಿಂದ ಬಾಕಿ 9 ತಿಂಗಳು ಮಾತ್ರ ಅವರಿಗೆ ಬಿಸಿಸಿಐನಲ್ಲಿ ಅವಕಾಶ. ಅದರಲ್ಲಿ ಈಗಾಗಲೇ 2 ತಿಂಗಳು ಮುಗಿದು ಹೋಗಿದೆ.

Advertisement

ಕಡ್ಡಾಯ ವಿಶ್ರಾಂತಿ ನಿಯಮ ಬದಲು
ಇತ್ತೀಚೆಗಷ್ಟೇ ಅಳವಡಿಸಿಕೊಂಡಿರುವ ಬಿಸಿಸಿಐ ನೂತನ ಸಂವಿಧಾನದಲ್ಲಿ 3 ವರ್ಷಗಳ 2 ಅವಧಿ ಅಧಿಕಾರ ನಡೆಸಿದ್ದರೆ (ರಾಜ್ಯಸಂಸ್ಥೆ, ಬಿಸಿಸಿಐ ಸೇರಿ ಆಗಬಹುದು, ಯಾವುದೋ ಒಂದು ಸಂಸ್ಥೆಯಲ್ಲಾದರೂ ಆಗಬಹುದು), ಇನ್ನು 3 ವರ್ಷ ಪದಾಧಿಕಾರಿಯೊಬ್ಬರು ಕಡ್ಡಾಯ ವಿಶ್ರಾಂತಿ ಪಡೆಯುವುದು ಅನಿವಾರ್ಯ.

Advertisement

Udayavani is now on Telegram. Click here to join our channel and stay updated with the latest news.

Next