Advertisement

CM ಸ್ಥಾನಕ್ಕೆ ಬಡಿದಾಟ ನಡೆಯುತ್ತಿದೆ: ಬಸವರಾಜ ಬೊಮ್ಮಾಯಿ

09:29 PM Sep 09, 2024 | Team Udayavani |

ಶಿರಹಟ್ಟಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟವೇ ನಡೆಯುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಪರಿಸ್ಥಿತಿ ನೋಡಿದರೆ ನನಗೆ ಕೆಟ್ಟ ಎನಿಸುತ್ತದೆ. ಅವರು ಸಿಎಂ ಸ್ಥಾನದಲ್ಲಿರುವಾಗಲೇ ಎಲ್ಲರೂ ಸಿಎಂ ಟವೆಲ್‌ ಹಾಕುವುದು, ನಾನು ಸಿಎಂ.. ನಾನು ಸಿಎಂ.. ಎಂದು ಪೈಪೋಟಿ ಮಾಡುತ್ತಿದ್ದಾರೆ.

ಒಬ್ಬ ನಾಯಕನ ಬಗ್ಗೆ ಅವಿಶ್ವಾಸ ಏನಿದೆ ಅನ್ನುವುದು ಇದರಿಂದ ಗೊತ್ತಾಗುತ್ತದೆ. ಸಿಎಂ ಮೊದಲು ತಮ್ಮ ಸಚಿವ ಸಂಪುಟ ಸರಿ ಮಾಡಿಕೊಳ್ಳಬೇಕು. ಆಮೇಲೆ ತನ್ನಿಂದ ತಾನೇ ಆಡಳಿತ ಬಿಗಿಯಾಗತ್ತದೆ. ಒಬ್ಬ ಮಂತ್ರಿಯೂ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ. ಬರೀ ರಾಜಕಾರಣ, ಅಧಿ ಕಾರ ಹಿಡಿಯುವ ವ್ಯಾಮೋಹದಲ್ಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next