Advertisement

12 ಲಕ್ಷ ರೂ. ಚಿನ್ನವನ್ನು ವಾರಸುದಾರರಿಗೆ ಒಪ್ಪಿಸಿದ ರಿಕ್ಷಾ ಚಾಲಕ

11:49 AM Nov 08, 2022 | Team Udayavani |

ಬಸ್ರೂರು : ಬಳ್ಕೂರು ಕಾರೇಕುದ್ರುವಿನ ರಿಕ್ಷಾ ಚಾಲಕ ಬಳ್ಕೂರಿನ ಪ್ರಕಾಶ್‌ ನಾಯಕ್‌ ಅವರು ಮಹಿಳೆಯೊಬ್ಬರು ತನ್ನ ರಿಕ್ಷಾದಲ್ಲಿ ಬಿಟ್ಟುಹೋಗಿದ್ದ ಸುಮಾರು 12 ಲಕ್ಷ ರೂ. ಬೆಲೆ
ಬಾಳುವ ಚಿನ್ನಾಭರಣವನ್ನು ಅವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ಲಲಿತಾ ಕೆ. ಅವರು ಸೋಮವಾರ ಕುಂದಾಪುರ ಪೇಟೆಯಿಂದ ತನ್ನ ಮನೆಯಿರುವ ಒಂಭತ್ತು ದಂಡಿಗೆಗೆ ರಿಕ್ಷಾದಲ್ಲಿ ತೆರಳಿದ್ದರು. ಮರಳಿ ಬಂದ ಚಾಲಕ ರಿಕ್ಷಾಕ್ಕೆ ಗ್ಯಾಸ್‌ ಹಾಕಲು ಹೋದಾಗ ಸೀಟಿನ ಕೆಳಗೆ‌ ಚಿನ್ನಾಭರಣ ಬಿದ್ದಿರುವುದನ್ನು ನೋಡಿದ್ದು, ತತ್‌ಕ್ಷಣ ಕುಂದಾಪುರ ಪೊಲೀಸ್‌ ಠಾಣೆಗೆ ಅದನ್ನು ಒಪ್ಪಿಸಿದರು.

ಇತ್ತ ಮನೆ ತಲುಪಿದ ಲಲಿತಾ ಅವರಿಗೆ ಚಿನ್ನ ಕಳೆದುಹೋಗಿರುವ ವಿಚಾರ ಗಮನಕ್ಕೆ ಬಂದಿದ್ದು, ದೂರು ಸಲ್ಲಿಸಲೆಂದು ಸಹೋದರ ನೊಂದಿಗೆ ಪೊಲೀಸ್‌ ಠಾಣೆಗೆ ಬಂದರು. ಪೊಲೀಸ್‌ ಉಪನಿರೀಕ್ಷಕ ಸದಾಶಿವ ಗವರೋಜಿ ಅವರು ರಿಕ್ಷಾ ಚಾಲಕನನ್ನು ಬರಮಾಡಿ ಅವರ ಉಪಸ್ಥಿತಿಯಲ್ಲಿ ಚಿನ್ನಾಭರಣವನ್ನು ಮಹಿಳೆಗೆ ಒಪ್ಪಿಸಿದರು. ಪ್ರಕಾಶ್‌ ಅವರ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ : ಉದಯವಾಣಿ ಸುವರ್ಣೋತ್ತರ ಸಂಭ್ರಮ : ಪತ್ರಿಕಾ ರಂಗದ ದಿಗ್ಗಜರ ಸಂಸ್ಮರಣೆ

Advertisement

Udayavani is now on Telegram. Click here to join our channel and stay updated with the latest news.

Next