Advertisement

ನರೇಗಾದಡಿ ವಲಸೆ ಕಾರ್ಮಿಕರಿಗೆ ಕೆಲಸ

05:36 PM May 23, 2020 | Naveen |

ಬಸವನಬಾಗೇವಾಡಿ: ತಾಲೂಕಿನ ವಿವಿಧ ಶಾಲೆಗಳಲ್ಲಿ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್‌ಗೆ ಅವಧಿ ಮುಗಿದ ಬಳಿಕ ನರೇಗಾ ಯೋಜನೆಯಡಿ ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಸಿಗಲಿದೆ ಎಂದು ತಾಪಂ ಅಧ್ಯಕ್ಷ ದೇವೇಂದ್ರ ನಾಯಕ ಭರವಸೆ ನೀಡಿದರು.

Advertisement

ತಾಲೂಕಿನ ಅಂಬಳನೂರ ಹಾಗೂ ನರಸಲಗಿ ತಾಂಡಾ ಶಾಲೆಗಳಲ್ಲಿ ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಿಗೆ ಶುಕ್ರವಾರ ಆಹಾರ ಕಿಟ್‌ ವಿತರಿಸಿ ಮಾತನಾಡಿದ ಅವರು, ಕ್ವಾರಂಟೈನ್‌ ಅವಧಿ ಮುಗಿದ ಬಳಿಕ ಅಂಬಳನೂರ ಹಾಗೂ ನರಸಲಗಿ ತಾಂಡಾದ ಜನರು ಕೂಲಿಗಾಗಿ ಬೇರೆ ರಾಜ್ಯಗಳಿಗೆ ಗುಳೆ ಹೋಗದೆ ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ಮಾಡಲು ಅವಕಾಶ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮನೋಹರಗೌಡ ಪಾಟೀಲ, ಸೋಮನಗೌಡ ಹೊಸಹಳ್ಳಿ, ಬಾಳಪ್ಪಗೌಡ ಹೊಸಹಳ್ಳಿ, ಪುನೀತ ಲಮಾಣಿ, ಶ್ರೀಕಾಂತ ಗೂರುಜಿ, ಕಾಂತು ರಾಠೊಡ, ಧರ್ಮು ಲಮಾಣಿ, ಸಂಗಪ್ಪ ರಾಠೊಡ, ಮೊತಿಲಾಲ ಚವ್ಹಾಣ, ಪ್ರಕಾಶ ರಾಠೊಡ, ಮುತ್ತಪ್ಪ ಲಮಾಣಿ, ಭೀಮು ರಾಠೊಡ, ಧನಸಿಂಗ್‌ ಚವ್ಹಾಣ, ನೀಲಕಂಠ ಚವ್ಹಾಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next