Advertisement

ಧನ್ನೂರಾ (ಕೆ)ವಾಡಿ ವ್ಯಕ್ತಿಗೆ ಕೋವಿಡ್ -ಅಧಿಕಾರಿಗಳ ಭೇಟಿ

06:17 PM May 16, 2020 | Naveen |

ಬಸವಕಲ್ಯಾಣ: ಹುಮನಾಬಾದ್‌ ತಾಲೂಕಿನ ಹುಣಸಗೇರಾ ಗ್ರಾಮದಲ್ಲಿ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಬಸವಕಲ್ಯಾಣ ತಾಲೂಕಿನ ಧನ್ನೂರಾ (ಕೆ) ವಾಡಿ ಗ್ರಾಮದ 35 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ದೃಢ ಪಟ್ಟಿದ್ದು, ಗ್ರಾಮೀಣ ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ.

Advertisement

ಧನ್ನೂರ(ಕೆ) ವಾಡಿ ಗ್ರಾಮದ ವ್ಯಕ್ತಿ ಮೇ 6ರಂದು ರಾತ್ರಿ ಮುಂಬೈನ ಮಾನಾಪುರ ಕಾಲೋನಿಯಿಂದ ಮೇ 7ರಂದು ಬೆಳಗ್ಗೆ ಬಂಗ್ಲಾದಿಂದ ಆಟೋದಲ್ಲಿ ಧನ್ನೂರ (ಕೆ) ವಾಡಿ ಗ್ರಾಮಕ್ಕೆ ಬಂದಿದ್ದಾನೆ. ಮೇ 9ರಂದು ಧನ್ನೂರಾ ಗ್ರಾಮದ ಪಿಎಚ್‌ಸಿ ಕೇಂದ್ರದಲ್ಲಿ ಗಂಟಲು ದ್ರವ್ಯ ಪಡೆದು ಕ್ವಾರಂಟೈನಲ್ಲಿ ಇಡಲಾಗಿತ್ತು, ಆದರೆ ಮೇ 15ರಂದು ಬಂದ ವರದಿ ಆತನಿಗೆ ಸೋಂಕು ಇರುವುದನ್ನು ತಿಳಿಸಿದೆ. ವಿಷಯ ತಿಳಿದು ಬಸವಕಲ್ಯಾಣ ಸಹಾಯಕ ಆಯುಕ್ತ ಭಂವರ್‌ಸಿಂಗ್‌ ಮೀನಾ, ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ, ತಾಪಂ ಇಒ ಮಡೋಳಪ್ಪ ಪಿ.ಎಸ್‌, ಗ್ರಾಮೀಣ ಪಿಎಸ್‌ಐ ವಾಸೀಂ ಪಟೇಲ್‌ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗ್ರಾಮವನ್ನು ಸೀಲ್‌ಡೌನ್‌ ಮಾಡಿ ಜನ-ವಾಹನ ಸಂಚಾರವಾಗದಂತೆ ನೋಡಿಕೊಳ್ಳಬೇಕೆಂದು ಗ್ರಾಮೀಣ ಪಿಎಸ್‌ಐ ವಾಸೀಂ ಪಟೇಲ್‌ ಅವರಿಗೆ ಸೂಚಿಸಿದರು. ನಂತರ ಗ್ರಾಮದಲ್ಲಿ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಔಷಧ ಸಿಂಪಡಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next