Advertisement

31ರಿಂದ ಹಾರಕೂಡ ಚೆನ್ನಬಸವ ಶ್ರೀ ಜಾತ್ರೋತ್ಸವ

01:27 PM Dec 28, 2019 | Naveen |

ಬಸವಕಲ್ಯಾಣ: ತಾಲೂಕಿನ ಸುಕ್ಷೇತ್ರ ಹಾರಕೂಡ ಗ್ರಾಮದ ಶ್ರೀ ಸದ್ಗುರು ಚೆನ್ನಬಸವ ಶಿವಯೋಗಿಗಳ 68ನೇ ಜಾತ್ರಾ ಮಹೋತ್ಸವ ಡಿ.31ರಿಂದ ಮೂರು ದಿನಗಳ ಕಾಲ ಜರುಗಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಸಂಸ್ಥಾನ ಮಠವನ್ನು ವರ್ಣ, ವಿದ್ಯುತ್‌ ಅಲಂಕಾರದಿಂದ ಭಕ್ತಾದಿಗಳನ್ನು ಆಕರ್ಷಿಸುವಂತೆ ಮಾಡಲಾಗಿದೆ.

Advertisement

ಡಿ.31ರಂದು ಬೆಳಗ್ಗೆ 8 ಗಂಟೆಗೆ ಅಭಿಷೇಕ, ಸಂಜೆ 4 ಗಂಟೆಗೆ ಪಲ್ಲಕ್ಕಿ ಉತ್ಸವ, ಸಂಜೆ 6 ಗಂಟೆಗೆ ರಥೋತ್ಸವ ಹಾಗೂ ಸಂಜೆ 7 ಗಂಟೆಗೆ ಶಿವಾನುಭವ ಚಿಂತನ ನಡೆಯಲಿದೆ. ಜಿಡಗಾ ಮುಕ್ತಿಮಂದಿರದ ಶ್ರೀ ಷಡಕ್ಷರಿ ಶಿವಯೋಗಿ ಡಾ|ಮುರಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ, ಸುಕ್ಷೇತ್ರ ಹಾರಕೂಡದ ಶ್ರೀ ಡಾ| ಚೆನ್ನವೀರ ಶಿವಚಾರ್ಯರು ನೇತೃತ್ವ ವಹಿಸುವರು.

ಸೋಲಾಪೂರ ಲೋಕಸಭಾ ಸದಸ್ಯರಾದ ಶ್ರೀ ಡಾ| ಜಯಸಿದ್ದೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಅತಿಥಿಯಾಗಿ ಬೀದರ್‌ ಸಂಸದ ಭಗವಂತ ಖೂಬಾ, ಶಾಸಕ ರಾಜಶೇಖರ ಪಾಟೀಲ, ಕಲಬುರಗಿ ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ್‌ ಮಲಾಜಿ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಸೇಡಂ ಶಾಸಕ ರಾಜಕುಮಾರ ಪಾಟೀಲ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಎಂ.ಬಿ.ಮರಮಕಲ್‌, ಖಾಜಾ ಬಂದೇನವಾಜ್‌ ವಿಶ್ವವಿದ್ಯಾಲಯದ ಉಪಕುಲಪತಿ ಡಾ|ಎಚ್‌.ಎಂ.ವಿರೂಪಾಕ್ಷಯ್ಯ, ಪ್ರಭಾವತಿ ಮಲ್ಲಿಕಾರ್ಜುನ ಹಂದ್ರಾಳೆ ಅವರನ್ನು ಸನ್ಮಾನಿಸಲಾಗುವುದು.

“ಚೆನ್ನ ಚಿಂತನ’ ಗ್ರಂಥ ಲೋಕಾರ್ಪಣೆ: ಡಿ.31ರಂದು ರಾತ್ರಿ 8 ಗಂಟೆಗೆ ಡಾ|ಚೆನ್ನವೀರ ಶಿವಾಚಾರ್ಯ ರಚಿತ “ಚೆನ್ನ ಚಿಂತನ’ ಗ್ರಂಥವನ್ನು ಹಿರಿಯ ಸಾಹಿತಿ ಡಾ| ಸಂಗಮೇಶ ಸವದತ್ತಿಮಠ ಲೋಕಾರ್ಪಣೆ ಮಾಡುವರು.

ಜ.1ರಂದು ಮಧ್ಯಾಹ್ನ 2 ಗಂಟೆಗೆ ಜಂಗಿ ಪೈಲ್ವಾನರಿಂದ ಕುಸ್ತಿ ನಡೆಯಲಿದೆ. ಹಿರೇನಾಗಾಂವ ವಿರಕ್ತ ಮಠದ ಶ್ರೀ ಜಯಶಾಂತಲಿಂಗ ಮಹಾಸ್ವಾಮಿಗಳು, ಗಡಿಗೌಡಗಾಂವ್‌ ಹಾವಲಿಂಗೇಶ್ವರ ಸಂಸ್ಥಾನ ಮಠದ ಶಾಂತವೀರ ಶಿವಾಚಾರ್ಯರು ಸಮ್ಮುಖ ವಹಿಸುವರು. ಬೀದರ್‌ ವಿಧಾನ ಪರಿಷತ್ತ ಸದಸ್ಯ ವಿಜಯಸಿಂಗ್‌ ಅವರು ಕುಸ್ತಿ ಪಂದ್ಯಕ್ಕೆ ಚಾಲನೆ ನೀಡವರು.

Advertisement

ವಿಧಾನ ಪರಿಷತ್‌ ಸದಸ್ಯ ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಾಸಕ ಸುಭಾಷ ಆರ್‌. ಗುತ್ತೆದಾರ್‌, ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ, ರೇವುನಾಯಕ ಬೇಳಮಗಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಬಿ.ಆರ್‌.ಪಾಟೀಲ, ಎಂ.ಜಿ.ಮೂಳೆ ಮತ್ತು ಸಿಂದ್ರಾಮ ಸಿಂಧೆ,
ಅನೀಲಕುಮಾರ ರಗಟೆ ಮತ್ತು ಜಿಪಂ ಸದಸ್ಯರಾದ ರಾಜಶೇಖರ ಮೇತ್ರೆ, ಸುಧೀರ ಕಾಡಾದಿ, ಆನಂದ ಪಾಟೀಲ ಹಾಗೂ ಬಾಬು ಹೊನ್ನಾನಾಯಕ, ಶರಣು ಸಲಗರ, ಸಿದ್ರಾಮಪ್ಪ ಗುದಗೆ ಪಾಲ್ಗೊಳ್ಳುವರು.

ಜ.2ರಂದು ಪಶು ಪ್ರದರ್ಶನ ಹಾಗೂ ಉತ್ತಮ ಪಶುಗಳಿಗೆ ಯೋಗ್ಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಆದ್ದರಿಂದ ಜಗನ್ನಾಥ ಪಾಟೀಲ ಮಂಠಾಳ ಹಾಗೂ ಗದಲೇಗಾಂವ್‌(ಬಿ), ಸಿರಗಾಪೂರ ಮತ್ತು ಹಾರಕೂಡ ಸಮಸ್ತ ಸದ್ಭಕ ಮಂಡಳಿ ಜಾತ್ರಾ ಮಹೋತ್ಸವದಲ್ಲಿ ಹೆಚ್ಚು ಭಕ್ತಾದಿಗಳು ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next