Advertisement

ಕದಳಿ ವನ ಸಮಗ್ರ ಅಭಿವೃದ್ಧಿಗೆ ಪ್ರಯತ್ನ

12:42 PM Nov 25, 2019 | Naveen |

ಬಸವಕಲ್ಯಾಣ: ಶ್ರೀಶೈಲಂ ಕದಳಿ ವನದಲ್ಲಿರುವ ಕನ್ನಡದ ಪ್ರಥಮ ಕವಯಿತ್ರಿ ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಅವರ ಐಕ್ಯಸ್ಥಳವನ್ನು ಅಲ್ಲಿನ ಸರ್ಕಾರ ಅಭಿವೃದ್ಧಿಗೊಳಿಸಬೇಕು ಎಂದು ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ನಗರದ ಅನುಭವ ಮಂಟಪದ ಪರಿಸರದಲ್ಲಿ ವಿಶ್ವ ಬಸವ ಧರ್ಮ ಟ್ರಸ್ಟ್‌, ಅನುಭವ ಮಂಟಪದಿಂದ ಹಮ್ಮಿಕೊಂಡ 40ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಎರಡನೇ ದಿನವಾದ ರವಿವಾರ ನಡೆದ ವಚನ ಕಲ್ಯಾಣ-ತಾತ್ವಿಕ ಗೋಷ್ಠಿ-3, ಗ್ರಂಥ ಲೋಕಾರ್ಪಣೆ ಮತ್ತು  ಡಾ| ಎಂ.ಎಂ. ಕಲಬುರಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತೆಲಂಗಾಣದಲ್ಲಿ ಈಗಾಗಲೇ ಅನುಭವ ಮಂಟಪ ನಿರ್ಮಾಣಕ್ಕಾಗಿ ಎರಡು ಭೂಮಿ ಮಂಜೂರು ಮಾಡಿ 10 ಕೋಟಿ ರೂ. ನೀಡಲಾಗಿದೆ ಮತ್ತು ವಿಶ್ವಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಸಂತೋಷ ಸಂಗತಿ ಎಂದರು.

ಬಡವರು-ರೈತರ ಪರ ಕೆಲಸ: ತೆಲಂಗಾಣದ ಹಣಕಾಸು ಸಚಿವ ತನ್ನೀರು ಹರೀಶರಾವ್‌ ಮಾತನಾಡಿ, ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಅಕ್ಕಮಹಾದೇವಿ ಐಕ್ಯಸ್ಥಳ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆ ನಮ್ಮ ಮುಂದೆ ಇಟ್ಟಿದ್ದಾರೆ. ಅವುಗಳನ್ನು ಮುಖ್ಯಮಂತ್ರಿ ಚಂದ್ರಶೇಖರರಾವ್‌ ಅವರ ಗಮನಕ್ಕೆ ತಂದು ಶೀಘ್ರ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜಹೀರಾಬಾದ್‌ ಸಂಸದ ಬಿ.ಬಿ. ಪಾಟೀಲ್‌ ಮಾತನಾಡಿ, ವರ್ಷದೊಳಗೆ ತೆಲಂಗಾಣದಲ್ಲಿ ಮಂಜೂರಾದ ಭೂಮಿಯಲ್ಲಿ ಅನುಭವ ಮಂಟಪ ನಿರ್ಮಿಸಲಾಗುವುದು ಎಂದು ಹೇಳಿದರು.

Advertisement

ಜಾ.ಲಿ.ಮ. ಬೀದರ್‌ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಪ್ರಾಸ್ತಾವಿಕ ಮಾತನಾಡಿ, ಸೂಕ್ಷ್ಮವಾದ ಸಂಪೂರ್ಣ ವಿಚಾರ ಮಂಡನೆ ಮಾಡುವುದೇ ತಾತ್ವಿಕ ಚಿಂತನೆಯಾಗಿದೆ. ಹೀಗಾಗಿ ವಚನ ಇದ್ದರೆ ಮಾತ್ರ ಮತ್ತೆ ಕಲ್ಯಾಣ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ನುಡಿದಂತೆ ನಡೆದ ಶರಣರು: ಶರಣರೂ ಮನುಷ್ಯರೇ ಆಗಿದ್ದರು. ಆದರೆ ಅವರು ಭಾಷೆ ಪ್ರಮಾಣ ಮತ್ತು ನುಡಿದಂತೆ ನಡೆಯುತ್ತಿದ್ದರು. ಅವರ ಬದುಕಿನಲ್ಲಿ ಅನುಭವಿಸಿರುವುದೇ ವಚನಗಳ ಮೂಲಕ ಮೂಡಿಬಂದಿದೆ. ಆದ್ದರಿಂದ ವಚನಗಳ ಅಡಿಪಾಯ ಹಾಕುವುದು ತುಂಬ ಅವಶ್ಯ. ಆ ನಿಟ್ಟಿನಲ್ಲಿಯೇ ಅನುಭವ ಮಂಟಪ ಉತ್ಸವ ಹಾಗೂ ಬಸವಾದಿ ಶರಣರ ಚಟುವಟಿಕೆ ನಿರಂತರ ಮಾಡುವ ಉದ್ದೇಶ ನಮ್ಮದಾಗಿದೆ ಎಂದರು.

ಅನುಭವ ಮಂಟಪ ಉತ್ಸವ ಸಮಿತಿ ಅಧ್ಯಕ್ಷರಾದ ಹಾಗೂ ಶಾಸಕ ಬಿ.ನಾರಾಯಣರಾವ್‌ ಮಾತನಾಡಿದರು. ಈ ವೇಳೆ ಮಹಾಲಿಂಗ ಸ್ವಾಮೀಜಿ, ಗುರುಬಸವ ದೇವರು, ಜಹೀರಾಬಾದ್‌ ಶಾಸಕ ಮಾಣಿಕರಾವ್‌, ಭಾಲ್ಕಿ ಶಾಸಕ ಈಶ್ವರ್‌ ಖಂಡ್ರೆ, ಜಿಪಂ ಅಧ್ಯಕ್ಷೆ ಗೀತಾ ಪಂಡೀತ ಚಿದ್ರಿ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಶಿವರಾಜ ನರಶೆಟ್ಟಿ, ಪ್ರದೀಪ ವಾತಡೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next