Advertisement

ಇಂದಿನಿಂದ ಬಸವ ಐಸಿರಿ ಬಾನುಲಿ ಕಾರ್ಯಕ್ರಮ

06:32 AM Jun 14, 2020 | Suhan S |

ಕೂಡಲಸಂಗಮ: ಬಸವಾದಿ ಶರಣರ ತತ್ವ, ಆದರ್ಶ ಸಿದ್ದಾಂತ, ವಚನ ಸಾಹಿತ್ಯ ಸಂದೇಶವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಧಾರವಾಡ ಆಕಾಶವಾಣಿ ಕೇಂದ್ರದಿಂದ ಹಮ್ಮಿಕೊಂಡ ಬಸವ ಐಸಿರಿ ಬಾನುಲಿ ಕಾರ್ಯಕ್ರಮ ಜೂ. 14ರ ಬೆಳಗ್ಗೆ 10ಗಂಟೆಯಿಂದ ಪ್ರಸಾರಗೊಳ್ಳುವುದು.

Advertisement

ಪ್ರತಿ ರವಿವಾರ ಬೆಳಗ್ಗೆ 10 ರಿಂದ 10:30ರ ವರೆಗೆ ಪ್ರಸಾರಗೊಳ್ಳುವ ಬಸವ ಐಸಿರಿ ಬಾನುಲಿ ಕಾರ್ಯಕ್ರಮವು 52 ವಾರಗಳ ಕಾಲ ನಿರಂತರ ನಡೆಯಲಿದೆ. ಧಾರವಾಡ, ವಿಜಯಪುರ, ಕಲಬುರಗಿ, ಹೊಸಪೇಟೆ, ರಾಯಚೂರ, ಚಿತ್ರದುರ್ಗ ಆಕಾಶವಾಣಿ ಹಾಗೂ ಧಾರವಾಡ, ಕಲಬುರ್ಗಿ ವಿವಿಧ ಭಾರತಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರಗೊಳ್ಳಲಿದೆ. ಕೂಡಲಸಂಗಮ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಕೂಡಲಸಂಗಮ, ಬಸವನ ಬಾಗೇವಾಡಿ, ಚಿಕ್ಕಸಂಗಮ, ಎಂ.ಕೆ.ಹುಬ್ಬಳ್ಳಿ, ತಂಗಡಗಿ ಕ್ಷೇತ್ರಗಳ ಪರಿಚಯ ಭಿತ್ತರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next