Advertisement

Bengaluru: ಬಿಲ್‌ ಕೇಳಿದ್ದಕ್ಕೆ ಬಾರ್‌ ಕ್ಯಾಶಿಯರ್‌ಗೆ ಹಲ್ಲೆ

11:24 AM Oct 08, 2024 | Team Udayavani |

ಬೆಂಗಳೂರು: ಮದ್ಯದ ಬಿಲ್‌ ಪಾವತಿಸುವಂತೆ ಕೇಳಿದಕ್ಕೆ ಬಾರ್‌ ಕ್ಯಾಶಿಯರ್‌ ಹಾಗೂ ಸಹಾಯಕನ ಮೇಲೆ ಬಿಯರ್‌ ಬಾಟಲಿಗಳಿಂದ ಹಲ್ಲೆ ನಡೆಸಿರುವ ಘಟನೆ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರು ಆಟೋ ಚಾಲಕರನ್ನು ಬಂಧಿಸಲಾಗಿದೆ.

Advertisement

ವಿದ್ಯಾರಣ್ಯಪುರ ನಿವಾಸಿ ಕಾರ್ತಿಕ್‌ (22) ಮತ್ತು ಚೇತನ್‌ ಕುಮಾರ್‌(23) ಬಂಧಿತರು. ಮತ್ತೂಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಆರೋ ಪಿಗಳು ಬಾರ್‌ ಕ್ಯಾಶಿಯರ್‌ ರಂಜಿತ್‌ ಮತ್ತು ಸಹಾಯಕ ಕ್ಯಾಶಿಯರ್‌ ಅಖೀ ಲೇಶ್‌ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು.

ಏನಿದು ಘಟನೆ?: ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಆರೋಪಿಗಳು, ಅ.5ರಂದು ರಾತ್ರಿ 10.15ಕ್ಕೆ ಜಯಶ್ರೀ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಬಂದು ಮದ್ಯ ಸೇವಿಸಿದ್ದಾರೆ. ಬಳಿಕ ಬಿಲ್‌ ಪಾವತಿಸುವಂತೆ ಕೇಳಿದಾಗ ಇಬ್ಬರು ಆರೋಪಿಗಳು ಕ್ಯಾಶಿಯರ್‌ ರಂಜಿತ್‌ ಮತ್ತು ಸಹಾಯಕ ಕ್ಯಾಶಿಯರ್‌ ಅಖೀಲೇಶ್‌ ಮೇಲೆ ಹಲ್ಲೆ ಮಾಡಿದ್ದಾರೆ. ನಾವು ಇದೇ ಏರಿಯಾದ ವರು. ನಮ್ಮನ್ನೇ ಬಿಲ್‌ ಕೇಳುತ್ತೀಯಾ? ಎಂದೆಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇನ್ನೊಮ್ಮೆ ಬಿಲ್‌ ಕೇಳಿದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿ ಬಾರ್‌ನಿಂದ ಪರಾರಿಯಾಗಿದ್ದಾರೆ.

ಮತ್ತೆ ಬಂದು ಬಿಯರ್‌ ಬಾಟಲ್‌ಗ‌ಳಿಂದ ಹಲ್ಲೆ: ಅಲ್ಲದೆ, ರಾತ್ರಿ 11 ಗಂಟೆ ಸುಮಾರಿಗೆ ಮತ್ತೆ ತಮ್ಮೊಂದಿಗೆ ಮತ್ತೂಬ್ಬನನ್ನು ಕರೆದುಕೊಂಡು ಬಾರ್‌ ಬಳಿ ಬಂದಿರುವ ಆರೋಪಿಗಳು, ಮತ್ತೆ ಜಗಳ ತೆಗೆದು ರಂಜಿತ್‌ ಮತ್ತ ಅಖೀಲೇಶ್‌ ಮೇಲೆ ಬಿಯರ್‌ ಬಾಟಲಿಗಳಿಂದ ಹಲ್ಲೆ ಮಾಡಿದ್ದಾರೆ. ವೇಳೆ ರಂಜಿತ್‌ ಮುಖಕ್ಕೆ ಗಾಯವಾಗಿ ರಕ್ತ ಸುರಿದಿದೆ. ಬಳಿಕ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next