Advertisement

Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್‌ ಭಸ್ಮ

07:38 PM Jun 17, 2024 | |

ಬಂಟ್ವಾಳ:  ಫರಂಗಿಪೇಟೆ ಸಮೀಪದ ಕುಮ್ಡೆಲುವಿನಲ್ಲಿ ಸ್ನೇಹಿತರಿಬ್ಬರ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಯೋರ್ವ ಅಮಾಯಕ ಯುವಕನೋರ್ವನ ಬೈಕನ್ನು ಸುಟ್ಟು ಭಸ್ಮಗೊಳಿಸಿದ ಘಟನೆ ನಡೆದಿದೆ.

Advertisement

ಕುಮ್ಡೆಲು ನಿವಾಸಿ ನಿತೇಶ್‌ ಪ್ರಕರಣ ಆರೋಪಿಯಾಗಿದ್ದು, ಆತ ತನಗೆ ದ್ವೇಷವಿರುವ ಕುಮ್ಡೆಲಿನ ಸುಜಿತ್‌ ಹಾಗೂ ಸುಮಂತ್‌ ಸಹೋದರರ ಬೈಕೆಂದು ತಿಳಿದು ಅಮ್ಮುಂಜೆ ಪಾಂಡೀಲು ನಿವಾಸಿ ಚಂದ್ರಹಾಸ ಅವರ ಬೈಕನ್ನು ಸುಟ್ಟು ಹಾಕಿದ್ದಾನೆ. ಚಂದ್ರಹಾಸ ಅವರು ಶಬರಿಮಲೆಗೆ ಹೋಗುವ ಹಿನ್ನೆಲೆಯಲ್ಲಿ ಬೈಕನ್ನು ಸ್ನೇಹಿತ ಸುಮಂತ್‌ ಅವರ ಮನೆಯಲ್ಲಿ ಇಟ್ಟು ಹೋಗಿದ್ದರು.

ಸುಮಂತ್‌ ಅವರು ತಮ್ಮ ಮನೆಯಲ್ಲೇ ಇದ್ದ ಚಂದ್ರಹಾಸರ ಬೈಕಿನಲ್ಲಿ ಒಂದೆರಡು ಬಾರಿ ಅಗತ್ಯ ಕೆಲಸಗಳಿಗೆ ತೆರಳಿದ್ದರು. ಸುಮಂತ್‌ ಅವರ ಸಹೋದರ ಸುಜಿತ್‌ ಹಾಗೂ ಆರೋಪಿ ನಿತೇಶ್‌ ಸ್ನೇಹಿತರಾಗಿದ್ದು, ಕೆಲ ದಿನಗಳ ಹಿಂದೆ ಗಲಾಟೆ ಮಾಡಿ ದ್ವೇಷ ಕಟ್ಟಿಕೊಂಡಿದ್ದರು.

ಹೀಗೆ ಚಂದ್ರಹಾಸರ ಬೈಕನ್ನು ಸುಜಿತ್‌ನ ಸಹೋದರನ ಸುಮಂತ್‌ನ ಬೈಕೆಂದು ಭಾವಿಸಿಕೊಂಡು ಸುಜಿತ್‌ನ ಮೇಲಿನ ದ್ವೇಷದಿಂದ ಆತನ ಮನೆಯಿಂದ ಕೊಂಚ ದೂರಕ್ಕೆ ದೂಡಿಕೊಂಡು ಹೋಗಿ ಸುಟ್ಟು ಹಾಕಿದ್ದಾನೆ. ಘಟನೆಯ ಕುರಿತು ಸುಮಂತ್‌ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next