ಬಂಟ್ವಾಳ: ಸಂಚಾರ ನಿಯಮ ಉಲ್ಲಂಘಿಸಿ ಆಟೋ ಚಲಾ ಯಿಸುತ್ತಿದ್ದ ವ್ಯಕ್ತಿಯ ವಿರುದ್ಧ ಸಂಚಾರ ಪೊಲೀಸರು ದಂಡ ವಿಧಿಸಿದರು ಎಂಬ ಕಾರಣಕ್ಕೆ ಆತ ಆಕ್ರೋಶಿತನಾಗಿ ಆಟೋರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ಸೋಮವಾರ ಬಿ.ಸಿ.ರೋಡಿನ ಕೈಕಂಬದಲ್ಲಿ ನಡೆದಿದೆ.
ಗೂಡಿನ ಬಳಿ ನಿವಾಸಿ ಮಹ ಮ್ಮದ್ ಅನ್ಸಾರ್ ಪ್ರಕರಣದ ಆರೋಪಿ ಯಾಗಿದ್ದು, ಆತ ಕೈಕಂಬದಲ್ಲಿ ಯೂನಿ ಫಾರ್ಮ್ ಇಲ್ಲದೆ ಮೊಬೈಲ್ನಲ್ಲಿ ಮಾತನಾಡಿಕೊಂಡು ಆಟೋ ಚಲಾಯಿಸುತ್ತಿದ್ದ. ಇದನ್ನು ಕಂಡ ಬಂಟ್ವಾಳ ಸಂಚಾರ ಠಾಣಾ ಪಿಎಸ್ಐ ಸುತೇಶ್ ಅವರು ಆತನನ್ನು ತಡೆದು ನಿಲ್ಲಿಸಿ 2 ಸಾವಿರ ರೂ. ದಂಡ ವಿಧಿಸಿದರು.
ಈ ವೇಳೆ ಏಕಾಏಕಿ ಆಕ್ರೋಶಿತನಾದ ಆತ ಪೊಲೀಸರ ಜತೆ ರಂಪಾಟ ಮಾಡಿ ಆಟೋದಲ್ಲಿದ್ದ ಪೆಟ್ರೋಲ್ ತೆಗೆದು ಆಟೋಗೆ ಸುರಿದು ಬೆಂಕಿ ಹಚ್ಚಲು ಮುಂದಾದ.ಈ ವೇಳೆ ಪೊಲೀಸ್ ವಾಹನಕ್ಕೂ ಪೆಟ್ರೋಲ್ ಸುರಿದಿರುವುದಾಗಿ ಪಿಎಸ್ಐ ಅವರು ಆರೋಪಿಸಿದ್ದಾರೆ. ಜತೆಗೆ ಆತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದಾರೆ.
ಆತ ಆಕ್ರೋಶಿತನಾಗಿ ಮಾತನಾ ಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ತನ್ನ ಬಳಿ ಹಣ ಇಲ್ಲ ಎಂದರೂ ಪೊಲೀಸರು ಕೇಳಿಲ್ಲ ಎಂದು ತನ್ನ ಆಕ್ರೋಶವನ್ನು ಹೊರ ಹಾಕಿದ್ದಾನೆ.