Advertisement

Bantwala: ಪದ್ಮನಾಭ ಸಾಮಂತ್‌ ಸಾವಿನ ಪ್ರಕರಣ; ತನಿಖೆಗೆ ವಿಶೇಷ ತಂಡ ರಚನೆ

08:43 PM May 28, 2024 | Team Udayavani |

ಬಂಟ್ವಾಳ: ಕಾಂಗ್ರೆಸ್‌ ಕಾರ್ಯಕರ್ತ ಪದ್ಮನಾಭ ಸಾಮಂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ವಿಶೇಷ ತನಿಖಾ ತಂಡ ರಚಿಸಿ ಬಂಟ್ವಾಳ ಡಿವೈಎಸ್‌ ಪಿ.ಎಸ್‌. ವಿಜಯಪ್ರಸಾದ್‌ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.

Advertisement

ಪದ್ಮನಾಭ ಸಾಮಂತ್‌ ಮೃತದೇಹ ಅವರ ಮನೆಯ ಗುಡ್ಡದ ಸಮೀಪ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಸಾವಿನ ಕುರಿತು ಸಂಶಯವಿದ್ದು, ವಿಶೇಷ ಪೊಲೀಸ್‌ ತಂಡ ರಚಿಸಿ ಪ್ರಕರಣದ ತನಿಖೆ ನಡೆಸುವಂತೆ ಒತ್ತಾಯ ಕೇಳಿ ಬಂದಿತ್ತು. ಪ್ರಸ್ತುತ ತಾನು ತನಿಖಾಧಿಕಾರಿಯಾಗಿ ನೇಮಕಗೊಂಡಿರುವುದಾಗಿ ಡಿವೈಎಸ್ಪಿಯವರು ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್‌ ಅವರಿಗೆ ಹಿಂಬರಹ ನೀಡಿ ವಿಶೇಷ ತಂಡ ರಚನೆಯ ವಿಚಾರವನ್ನು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next