Advertisement

ಬಂಟ್ವಾಳ: ಕಂಬಳ ಋತು ಸಂಪನ್ನ; ಮಿಜಾರು ಶ್ರೀನಿವಾಸ ಗೌಡಗೆ ವಿಶೇಷ ಪ್ರಶಸ್ತಿ

03:02 PM Apr 18, 2022 | Team Udayavani |

ಬಂಟ್ವಾಳ: 2021-22ರ ಸಾಲಿನ ಅಂತಿಮ ಕಂಬಳ ಕೂಟ ಬಂಟ್ವಾಳ ನಾವೂರಿನಲ್ಲಿ ಸಂಪನ್ನವಾಯಿತು. ರವಿವಾರ ಆರಂಭವಾಗಿ ಸೋಮವಾರ ಮಧ್ಯಾಹ್ನದವರೆಗೆ ಸಾಗಿದ ಬಂಟ್ವಾಳ- ನಾವೂರು “ಮೂಡೂರು – ಪಡೂರು” ಜೋಡುಕರೆ ಕಂಬಳ ಕೂಟದಲ್ಲಿ ಖ್ಯಾತ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರು ಮೂರು ಪ್ರಶಸ್ತಿ ಗೆದ್ದು ಮಿಂಚಿದರು.

Advertisement

ಕೂಟದಲ್ಲಿ ಒಟ್ಟು 162 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ ಮೂರು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಎಂಟು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 21 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ ಎಂಟು ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 62 ಜೊತೆ ಮತ್ತು ನೇಗಿಲು ಕಿರಿಯ ಸಬ್ ಜೂನಿಯರ್ ವಿಭಾಗದಲ್ಲಿ 47 ಜೊತೆ ಕೋಣಗಳು ಭಾಗವಹಿಸಿದ್ದವು.

ಇದನ್ನೂ ಓದಿ: ಪ್ರೇಮಿಗಳಲ್ಲಿ ಮನಸ್ತಾಪ: ಮಂಗಳೂರಿನಲ್ಲಿ ಮೊಬೈಲ್ ಟವರ್ ಏರಿ ಕುಳಿತ ಯುವಕ !

ಕೂಟದಲ್ಲಿ ಅತೀ ವೇಗದಲ್ಲಿ ಓಡಿದ ಕೋಣಗಳನ್ನು ಓಡಿಸಿದ ಓಟಗಾರನಿಗೆ ಬಹುಮಾನ ನೀಡಿದ್ದು ವಿಶೇಷವಾಗಿತ್ತು. ಸನತ್ ಶೆಟ್ಟಿ ಮತ್ತು ನಿತೀಶ್ ಕಾರ್ಕಳ ಪ್ರಾಯೋಜಕತ್ವದ ವಿಶೇಷ ಬಹುಮಾನ (15 ಸಾವಿರ ರೂ. ನಗದು) ವನ್ನು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರು ಪಡೆದರು. ಬೀಯಪಾದೆ ಕೆರೆಕೋಡಿಗುತ್ತು ಶೇಖರ ಪೂಜಾರಿ ಅವರ ‘ಎ’ ವಿಭಾಗದ ಕೋಣಗಳನ್ನು ಶ್ರೀನಿವಾಸ ಗೌಡ 11.60 ಸೆಕೆಂಡ್ ನಲ್ಲಿ ಗುರಿ ತಲುಪಿಸಿದ್ದರು.

Advertisement

ಬಂಟ್ವಾಳ- ನಾವೂರು ಕಂಬಳ ಫಲಿತಾಂಶ

ಕನೆಹಲಗೆ: (ನೀರು ನೋಡಿ ಬಹುಮಾನ)

ಪ್ರಥಮ: ಬೆಳ್ಳಿಪ್ಪಾಡಿ ರಮಾನಾಥ ರೈ

ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ಬಾರ್ಕೂರು ಶಾಂತಾರಾಮ ಶೆಟ್ಟಿ

ಹಲಗೆ ಮೆಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್

ಅಡ್ಡ ಹಲಗೆ

ಪ್ರಥಮ: ಅಳ್ಳಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ “ಎ”

ಹಲಗೆ ಮೆಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ಅಳ್ಳಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ “ಬಿ”

ಹಲಗೆ ಮೆಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ಹಗ್ಗ ಹಿರಿಯ

ಪ್ರಥಮ: ಮಿಜಾರ್ ಪ್ರಸಾದ್ ನಿಲಯ ಪ್ರಖ್ಯಾತ್ ಶೆಟ್ಟಿ “ಎ”

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಮಿಜಾರ್ ಪ್ರಸಾದ್ ನಿಲಯ ಪ್ರಖ್ಯಾತ್ ಶೆಟ್ಟಿ “ಬಿ”

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಹಗ್ಗ ಕಿರಿಯ

ಪ್ರಥಮ: ನಂದಳಿಕೆ ಕಂಪೊಟ್ಟು ವಿಕ್ಟರ್ ನೊರೊನ್ಹ

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ಶ್ರೀ ವಿಷ್ಣುಮೂರ್ತಿ ದೇವತಾ ಬಿಳಿಯೂರು ಮೇಗಿನಮನೆ ಶ್ರೀಶಾಂತ್ ಗಣಪ ಭಂಡಾರಿ

ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ

ಪ್ರಥಮ: ಬೀಯಪಾದೆ ಕೆರೆಕೋಡಿಗುತ್ತು ಶೇಖರ ಪೂಜಾರಿ “ಎ”

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಬೋಳದ ಗುತ್ತು ಸತೀಶ್ ಶೆಟ್ಟಿ “ಬಿ”

ಓಡಿಸಿದವರು: ಮರೋಡಿ ಶ್ರೀಧರ್

ನೇಗಿಲು ಕಿರಿಯ

ಪ್ರಥಮ: ಕಟೀಲ್ ಕೊಡೆತ್ತೂರು ಕಿನ್ನೆಚ್ಚಿಲ್ ಪ್ರಸಾದ್ ಶೆಟ್ಟಿ “ಎ”

ಓಡಿಸಿದವರು: ಪಟ್ಟೆ ಗುರುಚರಣ್

ದ್ವಿತೀಯ: ಕಜೆಕಾರ್ ಕೊಲೆಂಜಿಲೋಡಿ ಶ್ರೀನಿಧಿ ವಾರಿಜ ಸುಂದರ್ ಪೂಜಾರಿ

ಓಡಿಸಿದವರು: ಒಂಟಿಕಟ್ಟೆ ರಿತೇಶ್

ನೇಗಿಲು ಸಬ್ ಜೂನಿಯರ್

ಪ್ರಥಮ: ಪಣೋಳಿಬೈಲು ಭಂಡಾರದ ಮನೆ ರಮೇಶ್ ಕುಲಾಲ್ “ಎ”

ಓಡಿಸಿದವರು: ಪಟ್ಟೆ ಗುರುಚರಣ್

ದ್ವಿತೀಯ: ಕಕ್ಕೆಪದವು ಪೆಂರ್ಗಾಲು ಶಿವಮ್ಮ ವೆಂಕಪ್ಪ ಗೌಡ

ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್

Advertisement

Udayavani is now on Telegram. Click here to join our channel and stay updated with the latest news.

Next