Advertisement

ಬಂಟ್ವಾಳ: ಅಟ್ಟದಲ್ಲಿದ್ದ 11 ಅಡಿಕೆ ಚೀಲ ಕಳವು

11:47 PM Mar 07, 2024 | Team Udayavani |

ಬಂಟ್ವಾಳ: ಬಂಟ್ವಾಳ ಬೈಪಾಸ್‌ ರಸ್ತೆಯ ಮನೆಯೊಂದರ ಹಿಂಬದಿಯ ಕಿಟಕಿಯ ರಾಡ್‌ ತೆಗೆದು ಅಟ್ಟಳಿಗೆಯಲ್ಲಿ ಇಟ್ಟಿದ್ದ 11 ಗೋಣಿ ಅಡಿಕೆಯನ್ನು ಕಳವು ಮಾಡಿದ ಘಟನೆ ಮಾ. 2ರಂದು ಬೆಳಕಿಗೆ ಬಂದಿದೆ.

Advertisement

ಬೈಪಾಸ್‌ ನಿವಾಸಿ ಕೆ. ಜಿನಚಂದ್ರ ಜೈನ್‌ ಅವರು ಸುಮಾರು 3 ಕ್ವಿಂಟಾಲ್‌ ಅಡಿಕೆಯನ್ನು ಒಣಗಿಸಿ 11 ಗೋಣಿಗಳಲ್ಲಿ ತುಂಬಿಸಿ ಮನೆಯ ಅಟ್ಟಳಿಗೆಯಲ್ಲಿಟ್ಟಿದ್ದರು. ಮಾ. 1ರಂದು ಮನೆಗೆ ಬೀಗ ಹಾಕಿ ಹೋಗಿದ್ದು, 2ರಂದು ಬೆಳಗ್ಗೆ ಬಂದು ನೋಡಿದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ.

ಕಳವಾದ ಅಡಿಕೆಯ ಮೌಲ್ಯ 60 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next