Advertisement

ಬಂಟ್ವಾಳ ಎಸ್‌ಡಿಪಿಐ ಮುಖಂಡನ ಹತ್ಯೆ : ಪ್ರಮುಖ ಆರೋಪಿ ಭರತ್‌ ಸೆರೆ 

03:19 PM Jul 01, 2017 | Team Udayavani |

ಬಂಟ್ವಾಳ: ಎಸ್‌ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷ  ಮಹಮ್ಮದ್‌ ಅಶ್ರಫ್‌ ಹತ್ಯೆ ಪ್ರಕರಣದ ಮಾಸ್ಟರ್‌ ಮೈಂಡ್‌ ತಲೆ ಮರೆಸಿಕೊಂಡಿದ್ದ  ಭರತ್‌ ಕುಮ್ಡೇಲ್‌ನನ್ನು  ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. 

Advertisement

ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದರು. ಇದೀಗ ಬಂಧನಕ್ಕೊಳಗಾಗಿರುವ ಆರೋಪಿ ಭರತ್‌ ಭಜರಂಗದಳದ ಪುತ್ತೂರು ವಲಯದ ಸಂಚಾಲಕನಾಗಿದ್ದ. 

ನಿಷೇಧಾಜ್ಞೆ ಇದ್ದ ವೇಳೆಯಲ್ಲೆ ಹತ್ಯೆ ನಡೆದು ವಾತಾವರಣ ಇನ್ನಷ್ಟು ಉದ್ವಿಗ್ನ ಗೊಂಡಿತ್ತು. ಜುಲೈ 2 ರ ವರಗೆ  ಬಂಟ್ವಾಳ ಸೇರಿದಂತೆ ಜಿಲ್ಲೆಯ 4 ತಾಲೂಕುಗಳಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. 

ಕಲಾಯಿ ನಿವಾಸಿಯಾಗಿದ್ದ  ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಅಶ್ರಫ್ರರನ್ನು ದುಷ್ಕರ್ಮಿಗಳು ಬೆಂಜನಪದವು ಕರಾವಳಿ ಸೈಟ್‌ ರಾಮನಗರ ಸಮೀಪ ಜೂನ್‌ 21 ರಂದು  ಹಾಡಹಗಲೆ ತಲವಾರಿನಿಂದ ಕಡಿದು ಹತ್ಯೆಗೈದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next