Advertisement

ಬಂಟ್ವಾಳ-ಮೂಡಬಿದಿರೆ ರಸ್ತೆ : ಮರಬಿದ್ದು ವಾಹನ ಸಂಚಾರಕ್ಕೆ ಅಡಚಣೆ

01:03 AM Jun 27, 2019 | Sriram |

ಬಂಟ್ವಾಳ: ಬಿ.ಸಿ.ರೋಡ್‌ – ಮೂಡುಬಿದಿರೆ ಸಂಪರ್ಕ ರಸ್ತೆಯ ಬಿ. ಕಸ್ಬಾ ಗ್ರಾಮ ಮಂಡಾಡಿ ವಿದ್ಯಾಗಿರಿಯಲ್ಲಿ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಗಾಳಿ ಮಳೆಗೆ ಮರವೊಂದು ರಸ್ತೆಗೆ ಉರುಳಿ ಸುಮಾರು ಅರ್ಧ ಗಂಟೆ ಹೊತ್ತು ಸಂಚಾರ ಅಡಚಣೆ ಆಗಿತ್ತು.

Advertisement

ಮರ ಉರುಳುವಾಗ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಯಾವುದೇ ಅಪಾಯ ಎದುರಾಗಿಲ್ಲ. ಮೂಡಬಿದಿರೆ, ಮೂಲರಪಟ್ನ, ವಾಮದಪದವು, ವೇಣೂರು ಸಹಿತ ಈ ರಸ್ತೆಯಲ್ಲಿ ಸಂಚರಿಸುವ ಬಸ್‌ ಮತ್ತಿತರ ವಾಹನಗಳನ್ನು ಬದಲಿ ರಸ್ತೆಯಲ್ಲಿ ಹೋಗಲು ಸೂಚಿಸಲಾಯಿತು. ಮರ ತೆರವಾದ ಬಳಿಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಳೆಯಿಂದ ರಸ್ತೆಯಲ್ಲಿ ನೀರು ಹರಿದು ಡಾಮರಿನ ಮೇಲೆ ಕೆಸರು ಕಲ್ಲು ಮಣ್ಣು ಬಂದು ಸೇರಿದ್ದಲ್ಲದೆ ಹತ್ತಿರದ ಗದ್ದೆಯಲ್ಲಿ ಸಂಗ್ರಹವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಸ್ಥಳಕ್ಕೆಬಂಟ್ವಾಳ ಸಂಚಾರ ಠಾಣೆ ಎಸ್‌ಐ ಮಂಜುನಾಥ್‌, ಸಿಬಂದಿ, ಸಾರ್ವಜನಿ ಕರು ಮರ ತೆರವುಗೊಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next