Advertisement

Bantwal ಬಾಳ್ತಿಲ: ತೋಟಕ್ಕೆ ಜೆಸಿಬಿಯಿಂದ ಅಗಳು; ಹಲ್ಲೆ

11:18 PM Sep 02, 2023 | Team Udayavani |

ಬಂಟ್ವಾಳ: ಬಾಳ್ತಿಲ ಗ್ರಾಮದ ನಿವಾಸಿ ಮಹಿಳೆಯೊಬ್ಬರ ಕೃಷಿ ತೋಟಕ್ಕೆ ಜೆಸಿಬಿ ಮೂಲಕ ಅಗಳು ಹಾಕಿದ್ದು, ಈ ಕುರಿತು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ ಘಟನೆ ಸೆ. 1ರಂದು ನಡೆದಿದೆ.

Advertisement

ಘಟನೆಯ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಸೆ. 1ರಂದು ಮಧ್ಯಾಹ್ನ 1.30ರ ಸುಮಾರಿಗೆ ತೋಟದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭ ಜೆಸಿಬಿ ಶಬ್ದ ಕೇಳಿದೆ. ಬಳಿಕ ಆ ಸ್ಥಳಕ್ಕೆ ಹೋದಾಗ ಆರೋಪಿಗಳಾದ ರವಿಶಂಕರ, ಅನುಷಾ ಪಿ., ರಾಜೇಶ ವಿಟ್ಲ, ಲೊಕೇಶ, ವಿಶ್ವನಾಥ, ಸಚಿನ, ಯತೀಶ, ರಾಜಶೇಖರ ಶೆಟ್ಟಿ ಹಾಗೂ ಇತರ 25 ಮಂದಿ ಸೇರಿಕೊಂಡು ಜೆಸಿಬಿ ಯಲ್ಲಿ ಮಹಿಳೆಯ ಕೃಷಿ ಜಮೀನಿಗೆ ಅಗಳು ಹಾಕುತ್ತಿದ್ದರು.

ಈ ಕುರಿತು ಪ್ರಶ್ನಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದಿದ್ದು, ಜತೆಗೆ ಆಕೆಯ ಬಳಿ ಬಂದು ಅನುಚಿತವಾಗಿ ವರ್ತಿಸಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next