Advertisement

Bantwal 2 ಗಂಟೆ ಈಜಾಡಿ ಜೀವ ಉಳಿಸಿಕೊಂಡ ಯುವಕ!

12:42 AM Oct 08, 2023 | Team Udayavani |

ಬಂಟ್ವಾಳ: ತುಂಬೆ ಡ್ಯಾಂ ಬಳಿ ಯುವಕನೋರ್ವ ಮೀನಿಗೆ ಗಾಳ ಹಾಕುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿದ್ದು, ಕೊನೆಗೂ ಜೀವ ಸಹಿತ ಪಾರಾಗಿದ್ದಾರೆ. ಅವರು ಡ್ಯಾಂನಿಂದ ಹೊರಕ್ಕೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಸಿಲುಕಿ ಸುಮಾರು 2 ತಾಸುಗಳ ಕಾಲ ಈಜಾಡಿ ಕೊನೆಗೆ ಡ್ಯಾಂ ಸಿಬಂದಿ ಹಾಗೂ ಬಂಟ್ವಾಳ ಅಗ್ನಿಶಾಮಕ ದಳದವರ ನೆರವಿನಿಂದ ಮೇಲಕ್ಕೆ ಬಂದಿರುವ ಘಟನೆ ಅ. 2ರಂದು ನಡೆದಿದೆ.

Advertisement

ಯುವಕನನ್ನು ಬೋಳಂತೂರು ಭಾಗದ ಇರ್ಷಾದ್‌ ಎಂದು ಗುರುತಿಸ ಲಾಗಿದೆ. ಡ್ಯಾಂನ 30 ಗೇಟ್‌ಗಳ ಪೈಕಿ 5 ಗೇಟ್‌ಗಳಿಂದ ನೀರು ಹೊರಕ್ಕೆ ಹೋಗುತ್ತಿದ್ದು, ಹೀಗಾಗಿ ನೀರಿನ ರಭಸವೂ ಹೆಚ್ಚಿತ್ತು ಎನ್ನಲಾಗಿದೆ.

ಬಿದ್ದಿರುವ ಯುವಕನಿಗೆ ಈಜು ಬರುತ್ತಿದ್ದು, ಆದರೆ ನೀರಿನ ರಭಸದಿಂದ ಮೇಲಕ್ಕೆ ಬರಲು ಸಾಧ್ಯವಾಗಿರಲಿಲ್ಲ. ರಾತ್ರಿ ಸುಮಾರು 8 ಗಂಟೆಗೆ ನೀರಿಗೆ ಬಿದ್ದಿರುವ ಆತ 2 ಗಂಟೆಗಳ ಕಾಲ ಈಜಿ ಜೀವ ಉಳಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಡ್ಯಾಂ ಸಿಬಂದಿಗೆ ಎಲ್ಲಿಂದಲೋ ಬೊಬ್ಬೆ ಕೇಳಿದ್ದು, ಹೋಗಿ ನೋಡಿದಾಗ ವ್ಯಕ್ತಿಯೋರ್ವ ನೀರಿನಲ್ಲಿ ಒದ್ದಾಡುತ್ತಿರುವುದು ಕಂಡು ಬಂತು.

ಕೂಡಲೇ ಡ್ಯಾಂ ಸಿಬಂದಿ ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಎಲ್ಲರೂ ಸೇರಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next