Advertisement

ಬನ್ನೇರುಘಟ್ಟ ಉದ್ಯಾನವನದ ಆನೆ ಮರಿಯ ಹೆಸರು “ಸುಧಾ’ಮೂರ್ತಿ

04:09 PM Aug 27, 2020 | sudhir |

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಜನಿಸಿದ ಸುವರ್ಣ ಆನೆಯ ಹೆಣ್ಣು ಮರಿಗೆ ಇನ್ಫೋಸಿಸ್‌ ಸಂಸ್ಥೆಯ ಸುಧಾಮೂರ್ತಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಉದ್ಯಾನವನಕ್ಕೆ ಮತ್ತು ವನ್ಯಜೀವಿಗಳ ಉಳಿವಿಗೆ ಸುಧಾಮೂರ್ತಿ ಅವರು ಸಲ್ಲಿಸಿರುವ ಸೇವೆ ಗುರುತಿಸಿ ಅವರ ಹೆಸರು ಇಡಲು ಅವರನ್ನು ಅನುಮತಿಗೆ ಕೋರಲಾಗಿತ್ತು. ಅವರು ನಮ್ಮ ಕೋರಿಕೆ ಒಪ್ಪಿಕೊಂಡಿದ್ದರಿಂದ ಸುವರ್ಣ ಆನೆಯ ಹೆಣ್ಣು ಮರಿಗೆ “ಸುಧಾ’ ಎಂದು ಹೆಸರು ಇಡಲಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಣಾಧಿಕಾರಿ ವನಶ್ರೀವಿಪಿನ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next