Advertisement

ಬನ್ನೇರುಘಟ್ಟದಲ್ಲಿ ನೀರು ಕುದುರೆ ಮರಿ ಜನನ

11:18 AM Feb 02, 2018 | |

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ಆವರಣದಲ್ಲಿ ಸಿಂಹಿಣಿಯೊಂದು ಮೃತಪಟ್ಟ ಕಹಿ ಘಟನೆ ನಡುವೆಯೇ ಮೃಗಾಲಯದಲ್ಲಿನ ನೀರು ಕುದುರೆ ಒಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಸಫಾರಿಯಲ್ಲಿನ ಸಿಂಹಣಿ ಹೇಮಾ (14) ಮೃತ ಬುಧವಾರ ರಾತ್ರಿ ಮೃತಪಟ್ಟಿದೆ.

Advertisement

ನೀರು ಕುದುರೆ ದಾಶ್ಯ ಮುದ್ದಾದ ಮರಿಗೆ ಜನ್ಮ ನೀಡಿದೆ. ಸಿಂಹಿಣಿ ಹೇಮಾ ಕಳೆದ ಮೂರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರ ಚಿಕಿತ್ಸೆ ಫ‌ಲಕಾರಿಯಾಗದೇ ಮೃತ ಪಟ್ಟಿದೆ ಎಂದು ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಸಿಂಹಿಣಿಗೆ ಪಶುವೈದ್ಯ ಕಾಲೇಜಿನ ಹಿರಿಯ ವೈದ್ಯರ ತಂಡ ಚಿಕಿತ್ಸೆ ನೀಡುತ್ತಾ ಬಂದಿತ್ತಾದರೂ ಯಾವುದೇ ಪ್ರಗತಿ ಕಾಣದೇ ಮೃತ ಪಟ್ಟಿದೆ. 26 ವರ್ಷ ವಯಸ್ಸಿನ ನೀರು ಕುದುರೆ ಕಾರ್ತೀಕ್‌ ಹಾಗೂ 9 ವರ್ಷ ವಯಸ್ಸಿನ ದಾಶ್ಯ ದಂಪತಿಗೆ ಮರಿ ಜನಿಸಿದ್ದು, ತಾಯಿ ಮರಿ ಆರೋಗ್ಯದಿಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next