Advertisement

ಬಂಕಾಪುರ: ಪಿಎಸ್‌ಐ-ಮುಖ್ಯಾಧಿಕಾರಿಗೆ ಸನ್ಮಾನ

05:30 PM May 06, 2020 | Suhan S |

ಬಂಕಾಪುರ: ಕೋವಿಡ್ 19 ಹೊಡೆದೋಡಿಸಲು ಒಂದೂವರೆ ತಿಂಗಳಿನಿಂದ ಕುಟುಂಬ ತೊರೆದು ಹಗಲಿರುಳೆನ್ನದೇ ಶ್ರಮಿಸುತ್ತಿರುವ ಪಿಎಸ್‌ಐ ಸಂತೋಷಗೌಡ ಪಾಟೀಲ ಹಾಗೂ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿಯವರ ಕಾರ್ಯ ಶ್ಲಾಘನೀಯ ಎಂದು ಕ್ಲೀನ್‌ ಲೈಫ್‌ ಇಂಡಿಯಾ ಫೌಂಡೇಶನ್‌ ಸದಸ್ಯ ಗಂಗುಬಾಯಿ ದೇಸಾಯಿ ಹೇಳಿದರು.

Advertisement

ಅವರು ಪಿಎಸ್‌ಐ ಮತ್ತು ಪುರಸಭೆ ಮುಖ್ಯಾಧಿಕಾರಿಯನ್ನು ಸನ್ಮಾನಿಸಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಪಿಎಸ್‌ಐ ಸಂತೋಷಗೌಡ ಪಾಟೀಲ ಮಾತನಾಡಿ, ಕೋವಿಡ್ 19 ಮಹಾಮಾರಿ ತೊಲಗಿಸಲು, ಲಾಕ್‌ ಡೌನ್‌ನನ್ನು ಯಶಸ್ವಿಗೊಳಿಸಲು ಪಟ್ಟಣದಲ್ಲಿ ಕೆಲವು ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಿದ್ದೇನೆಯೇ ಹೊರತು ಬೇರೆ ಯಾವ ಉದ್ದೇಶಕ್ಕೂ ಅಲ್ಲ ಎಂದರು.

ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಮಾತನಾಡಿ ಕ್ಲೀನ್‌ ಲೈಫ್‌ ಇಂಡಿಯಾ ಫೌಂಡೇಶನ್‌ ಹಾಗೂ ವಿವಿದ ಸಂಘ ಸಂಸ್ಥೆಗಳು ಬಡ ಬಗ್ಗರಿಗೆ ನೀಡಿದ ಸಹಾಯವನ್ನು ಸ್ಮರಿಸಿದರು. ಕ್ಲೀನ್‌ ಲೈಫ್‌ ಇಂಡಿಯಾ ಫೌಂಡೇಶನ್‌ ಕಾರ್ಯದರ್ಶಿ ಸಿ.ಆರ್‌.ದೇಸಾಯಿ ಬಡ, ಬಗ್ಗರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.

ಪೌಂಢೇಶನ್‌ ಅಧ್ಯಕ್ಷ ಮಲ್ಲಿಕಾರ್ಜುನ ದೇಸಾಯಿ, ಶಂಬಣ್ಣ ವಳಗೇರಿ, ಪ್ರಲ್ಹಾದ ರಾಯ್ಕರ, ಸತೀಷ ಆಲದಕಟ್ಟಿ, ಮಂಜುನಾಥ ಕೂಲಿ, ಮಲ್ಲಿಕ ಪಟೇಲ, ಸಿದ್ದು ಕಟಗಿಮಠ ಇತರರು ಇದ್ದರು. ಶಾಮಲಾಬಾಯಿ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಸವೂರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next