Advertisement

ಎಚ್‌1ಎನ್‌1ಬ್ಯಾಂಕ್‌ ಅಧಿಕಾರಿ ಸಾವು

03:45 AM Feb 12, 2017 | Team Udayavani |

ಪಡುಬಿದ್ರಿ: ಭಾರತ್‌ ಬ್ಯಾಂಕ್‌ನ ಮೂಲ್ಕಿ ಶಾಖಾ ಪ್ರಬಂಧಕ ಲಕ್ಷ್ಮೀನಾರಾಯಣ ಸಿ. ಸಾಲ್ಯಾನ್‌ (43) ಎಚ್‌1 ಎನ್‌1 ಜ್ವರಬಾಧೆ ಯಿಂದಾಗಿ ಶನಿವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾದರು. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

Advertisement

10 ದಿನಗಳಿಂದ ಜ್ವರ ಬಾಧೆಗೊಳಗಾಗಿದ್ದ ಅವರನ್ನು ಚಿಕಿತ್ಸೆಗಾಗಿ ಉಡುಪಿ ಬಳಿಧಿಕ ಮಂಗಳೂರಿನ ಆಸ್ಪತ್ರೆಗಳಿಗೆ ಒಯ್ಯಲಾಗಿತ್ತು. ಅಲ್ಲಿ ಜ್ವರ ಉಲ್ಬಣಿಸಿ ಸಾವಿಗೀಡಾದರು.

ಹೆಜಮಾಡಿಯ ಪ್ರಸಿದ್ಧ ಜಾರಂದಾಯ ದೈವಪಾತ್ರಿ ದಿ| ಚೆನ್ನಪ್ಪ ಪೂಜಾರಿಯವರ ಪುತ್ರ ಲಕ್ಷ್ಮೀನಾರಾಯಣ ಸಾಲ್ಯಾನ್‌ ಅವರು ಭಾರತ್‌ ಬ್ಯಾಂಕ್‌ನಲ್ಲಿ ಸುಮಾರು 16 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಮುಂಬಯಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಮಂಗಳೂರು, ಉಡುಪಿ ಶಾಖೆಗಳ ಬಳಿಕ ಮೂಲ್ಕಿಯಲ್ಲಿ ಸೇವಾ ನಿರತರಾಗಿದ್ದರು.

ಅಲ್ಪಾವಧಿಯಲ್ಲಿಯೇ ಮೂಲ್ಕಿಯಲ್ಲಿ ಭಾರತ್‌ ಬ್ಯಾಂಕ್‌ನ ವ್ಯವಹಾರವನ್ನು ಗುರಿ ಮೀರಿದ ಸಾಧನೆಗಳೊಂದಿಗೆ ಉತ್ತುಂಗಕ್ಕೇರಿಸಿದ್ದರು. ಹೆಜಮಾಡಿ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷರಾಗಿದ್ದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next