Advertisement

ಮಂಗಳೂರು: ಬ್ಯಾಂಕ್‌ ಮ್ಯಾನೇಜರ್‌ ಮಹಿಳೆ ಆತ್ಮಹತ್ಯೆ

06:26 PM Oct 13, 2022 | Team Udayavani |

ಮಂಗಳೂರು: ನಗರದ ಬಿಜೈನ ಬ್ಯಾಂಕ್‌ ಒಂದರಲ್ಲಿ  ಮ್ಯಾನೇಜರ್‌ ಆಗಿ ಉದ್ಯೋಗದಲ್ಲಿದ್ದ ಪದ್ಮಾಕ್ಷಿ (52) ಎನ್ನುವವರು ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಶಕ್ತಿನಗರದ ನಿವಾಸಿಯಾಗಿದ್ದು, ಯೆಯ್ನಾಡಿ ಶರ್ಬತ್‌ ಕಟ್ಟೆ ಬಳಿ ಹೊಸದಾಗಿ ಖರೀದಿಸಿದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಬೆಳಗ್ಗೆ 9.30ರ ವೇಳೆಗೆ ಮನೆಯಿಂದ ಬ್ಯಾಂಕ್‌ಗೆಂದು ಹೊರಟವರು ಬ್ಯಾಂಕ್‌ಗೆ ಹೋಗದೆ, ನೇರವಾಗಿ ಹೊಸ ಮನೆಗೆ ತೆರಳಿ ಅಲ್ಲಿ ನೇಣು ಹಾಕಿಕೊಂಡಿದ್ದಾರೆ. ಘಟನೆಗೆ ನೈಜ ಕಾರಣ ತಿಳಿದು ಬಂದಿಲ್ಲ. ಆದರೆ ಕಚೇರಿ ಕೆಲಸದ ಕುರಿತ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next