Advertisement

ಇಂದು, ನಾಳೆ ದೇಶಾದ್ಯಂತ ಬ್ಯಾಂಕ್‌ ಮುಷ್ಕರ

09:35 AM Feb 01, 2020 | Hari Prasad |

ಹೊಸದಿಲ್ಲಿ: ದೇಶಾದ್ಯಂತ ಜ.31, ಫೆ.1ರಂದು ಬ್ಯಾಂಕ್‌ ಉದ್ಯೋಗಿಗಳ ಮುಷ್ಕರ ನಡೆಯಲಿದ್ದು, ಫೆ.2 ರವಿವಾರ ಆಗಿರುವ ಕಾರಣ, ಸಾರ್ವಜನಿಕರಿಗೆ ಹಣಕಾಸು ವ್ಯವಹಾರ ನಡೆಸಲು ಅನನುಕೂಲ ಉಂಟಾಗಲಿದೆ.

Advertisement

ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಆಡಳಿತ ಮಂಡಳಿ ಜತೆಗೆ ನಡೆಸಿದ ಮಾತುಕತೆ ವಿಫ‌ಲವಾಗಿರುವ ಹಿನ್ನೆಲೆಯಲ್ಲಿ ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್ಸ್‌ ಮುಷ್ಕರಕ್ಕೆ ಕರೆ ನೀಡಿದೆ.

2017ರಿಂದ ಈಚೆಗೆ ವೇತನ ಪರಿಷ್ಕರಣೆ ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದರೂ, ಫ‌ಲ ನೀಡಿಲ್ಲ. ಭಾರತೀಯ ಬ್ಯಾಂಕ್‌ಗಳ ಒಕ್ಕೂಟದ ಕಠಿನ ನಿಲುವಿನ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ವಿವಿಧ ಸಂಘಟನೆಗಳು ವಾದಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next