Advertisement
ಅಜರುದ್ದೀನ್ ಯಾನೆ ಮಂಚಕಲ್ ಅಜರುದ್ದೀನ್(32) ಹಾಗೂ ಕಾಪು ಅಜರು ದ್ದೀನ್(25)ಬಂಧಿತರು. ಬಂಧಿತ ಅಜರುದ್ದೀನ್ನಿಂದ ದರೋಡೆ ನಡೆಸಿದ್ದ 21 ಸಾವಿರ ರೂ. ಮೌಲ್ಯದ ಚಿನ್ನದ ಬೆಂಡೋಲೆ ಹಾಗೂ ಕಾಪು ಸಮೀಪ ಸರ ಕಳ್ಳತನಕ್ಕಾಗಿ ಬಳಸಿದ 2 ಲಕ್ಷ ರೂ. ಮೌಲ್ಯದ ನಿಂಜಾ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
Related Articles
ಈ ನಡುವೆ ಕಾಪು ಅಜರುದ್ದೀನ್ನ ತಾಯಿ ಕೈರುನ್ನೀಸ ಹಾಗೂ ಅಕ್ಕ ಮುಮ್ತಾಸ್ನನ್ನು ಫೆ. 16ರಂದು ಬಂಧಿ ಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಜರುದ್ದೀನ್ ಕಳವುಗೈದ ಚಿನ್ನಾಭರಣವನ್ನು ಇವರು ಅಡವಿಟ್ಟು ಸಾಲ ಪಡೆದಿದ್ದರು.
Advertisement
ಒಟ್ಟು 8 ಆರೋಪಿಗಳ ಬಂಧನಉತ್ತರಕನ್ನಡ ಜಿಲ್ಲೆ ಹಾಗೂ ಕಾರ್ಕಳ ಬಂಗ್ಲೆಗುಡ್ಡೆ ಸಹಿತ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ದರೋಡೆ ಪ್ರಕರಣಗಳಿಗೆ ಸಂಬಂಧಿಸಿ ಇದುವರೆಗೆ 8 ಆರೋಪಿ ಗಳನ್ನು ಬಂಧಿಸಲಾಗಿದ್ದು, 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಬಂಗ್ಲೆಗುಡ್ಡೆ ಪ್ರಕರಣದ ಮತ್ತೋರ್ವ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬಹುಮಾನ ಘೋಷಣೆ
ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ್ದ ಆರೋಪಿಗಳನ್ನು ಬಂಧಿಸಿದ ಕಾರ್ಕಳ ಹಾಗೂ ಕಾಪು ಪೊಲೀಸ್ ಅಪರಾಧ ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬ. ನಿಂಬರಗಿ ಬಹುಮಾನ ಘೋಷಿಸಿದ್ದಾರೆ.