Advertisement

Bangladesh ಮತ್ತೆ ಹಿಂದೂ ಹಿಂಸೆ 49 ಶಿಕ್ಷಕರಿಂದ ರಾಜೀನಾಮೆ

12:59 AM Sep 02, 2024 | Team Udayavani |

ಢಾಕಾ: ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿಯ ಬಳಿಕ ಬಾಂಗ್ಲಾ ದೇಶ ದಲ್ಲಿ ಅಲ್ಪಸಂಖ್ಯಾಕರ ಮೇಲಿನ ದಾಳಿಗಳು ನಿರಂತರವಾಗಿ ನಡೆಯುತ್ತಿವೆ.

Advertisement

ವಿಶೇಷವಾಗಿ ಹಿಂದೂ ಸಮುದಾಯಕ್ಕೆ ಸೇರಿದ 49 ಶಿಕ್ಷಕರಿಂದ ಆಗ್ರಹಪೂರ್ವಕವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಬಾಂಗ್ಲಾದೇಶ ಛಾತ್ರ ಐಕ್ಯ ಪರಿಷತ್‌ನ ಸಂಯೋಜಕ ಸಜೀಬ್‌ ಸರ್ಕಾರ್‌ ಆರೋಪಿಸಿದ್ದಾರೆ.

ವಿವಾದದ ಬಳಿಕ 19 ಶಿಕ್ಷಕರಿಗೆ ಹುದ್ದೆಗಳನ್ನು ಮರಳಿ ಕಲ್ಪಿಸ ಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅನೇಕ ಶಿಕ್ಷ ಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆ. 18ರಂದು ಅಜೀಂಪುರದ ಸರಕಾರಿ ಮಹಿಳಾ ಕಾಲೇಜಿಗೆ ನುಗ್ಗಿದ್ದ 50 ವಿದ್ಯಾರ್ಥಿ ಗಳ ಗುಂಪು ಪ್ರಾಂಶುಪಾಲರು ಮತ್ತು ಇಬ್ಬರು ಉಪನ್ಯಾಸಕರ ರಾಜೀನಾಮೆಗೆ ಆಗ್ರಹಿಸಿತ್ತು. ಅಲ್ಲದೆ ಖಾಜಿ ನಸ್ರುಲ್‌ ವಿ.ವಿ.ಯ ಸಾರ್ವಜನಿಕ ಆಡಳಿತ ವಿಭಾಗ ಮುಖ್ಯಸ್ಥರಿಂದಲೂ ರಾಜೀನಾಮೆ ಪಡೆಯಲಾಗಿತ್ತು.

ಯೂನುಸ್‌ ತುಟಿ ಬಿಚ್ಚುತ್ತಿಲ್ಲ ಏಕೆ?
ಈ ಕುರಿತು ಲೇಖಕಿ ತಸ್ಲಿಮಾ ನಸ್ರಿನ್‌ ಪ್ರತಿಕ್ರಿಯೆ ನೀಡಿ, ಬಾಂಗ್ಲಾದಲ್ಲಿ ಶಿಕ್ಷಕರ ರಾಜೀನಾಮೆಗೆ ಆಗ್ರಹಿಸಲಾಗುತ್ತಿದೆ. ಪತ್ರ ಕರ್ತರು, ಸಚಿವರು ಮತ್ತು ಅಧಿಕಾರಿಗಳನ್ನು ಹಿಂಸಿಸಲಾಗುತ್ತಿದೆ. ಅಹಮದಿ ಮತ್ತು ಶಿಯಾ ಮುಸಲ್ಮಾನರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಈ ಕುರಿತು ಮಧ್ಯಾಂತರ ಸರಕಾರದ ಮುಖ್ಯಸ್ಥ ಯೂನುಸ್‌ ತುಟಿ ಬಿಚ್ಚಿಲ್ಲ ಎಂದು ಟೀಕಿಸಿದ್ದಾರೆ.

Advertisement

ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರಿಶ್ಚಿಯನ್‌ ಯೂನಿಟಿ ಕೌನ್ಸಿಲ್‌ ಮತ್ತು ಬಾಂಗ್ಲಾದೇಶ ಪೂಜಾ ಉಡಾjಪನ್‌ ಪರಿಷತ್‌ ನೀಡಿರುವ ಮಾಹಿತಿಯಂತೆ ಹಸೀನಾ ಪದಚ್ಯುತಿಯ ಅನಂತರ ಅಲ್ಪಸಂಖ್ಯಾಕರ ಮೇಲೆ ಸುಮಾರು 205 ದಾಳಿಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next