Advertisement

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

09:08 PM Oct 05, 2024 | Team Udayavani |

ಗ್ವಾಲಿಯರ್‌: ಭಾರತ ವಿರುದ್ಧದ ಮೊದಲನೇ ಟಿ20 ಪಂದ್ಯಕ್ಕಾಗಿ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಆಗಮಿಸಿರುವ ಬಾಂಗ್ಲಾದೇಶ ಕ್ರಿಕೆಟ್‌ ತಂಡ, ಇಲ್ಲಿ ನಗರದಲ್ಲಿರುವ ಪ್ರಸಿದ್ಧ ಮೋತಿ ಮಸೀದಿಗೆ ಭೇಟಿ ನೀಡದೆ, ತಾವು ತಂಗಿದ್ದ ಹೋಟೆಲ್‌ನಲ್ಲೇ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ್ದಾಗಿ ವರದಿಯಾಗಿದೆ.

Advertisement

ಮಸೀದಿ ಸುತ್ತ ಭದ್ರತೆಗೆ ವ್ಯವಸ್ಥೆ ಮಾಡಿದ್ದರೂ ಆಟಗಾರರು ಇದಕ್ಕೆ ಒಪ್ಪದೆ ಹೋಟೆಲ್‌ನಲ್ಲೇ ಪ್ರಾರ್ಥಿಸಿದ್ದಾಗಿ ವರದಿ ಹೇಳಿದೆ. ನಾವು ಮೋತಿ ಮಸೀದಿಯ ಸುತ್ತ ಬಿಗಿ ಭದ್ರತೆ ಕಲ್ಪಿಸಿದ್ದೆವು. ಆದರೆ ಬಾಂಗ್ಲಾದೇಶ ತಂಡ ಮಸೀದಿಗೆ ಬದಲು ಒಪ್ಪಲಿಲ್ಲ ಎಂದು ಗ್ವಾಲಿಯರ್‌ ಇನ್ಸ್‌ಪೆಕ್ಟರ್‌ ಅರವಿಂದ ಸಕ್ಸೇನಾ ಮಾಹಿತಿ ನೀಡಿದ್ದಾರೆ.

ಬಾಂಗ್ಲಾ ದಂಗೆಯ ಬಳಿಕ ಭೀತಿಯ ಕಾರಣ ಕ್ರಿಕೆಟ್‌ ತಂಡ ಮಸೀದಿಗೆ ಭೇಟಿ ನೀಡದಿರುವ ಸಾಧ್ಯೆಯಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next