Advertisement

ಚಾಕುವಿನಿಂದ ಇರಿದು ಬಂಗಾರಪೇಟೆ ತಹಶೀಲ್ದಾರ್ ಹತ್ಯೆ!

07:35 PM Jul 09, 2020 | sudhir |

ಕೋಲಾರ : ಜಮೀನಿನ ಸರ್ವೇ ಕಾರ್ಯಕ್ಕೆ ತೆರಳಿದ್ದ ಬಂಗಾರಪೇಟೆ ತಾಲ್ಲೂಕಿನ ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ ಅವರನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬಂಗಾರ ಪೇಟೆಯ ತೋಪನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

Advertisement

ವಿವಾದಿತ ಜಾಗಕ್ಕೆ ಸಂಬಂಧಪಟ್ಟಂತೆ ಬಂಗಾರಪೇಟೆ ತಾಲ್ಲೂಕಿನ ತಹಶೀಲ್ದಾರ್ ಬಳಿ ಸರ್ವೇ ನಡೆಸಲು ತಿಳಿಸಲಾಗಿತ್ತು.

ತಹಶೀಲ್ದಾರ್ ಹಾಗೂ ಓರ್ವ ಸಿಬ್ಬಂದಿ ಜೊತೆ ಜಾಗದ ಸರ್ವೇ ಕಾರ್ಯಕ್ಕೆ ತೆರಳುತ್ತಾರೆ.ಈ ಸಂದರ್ಭ ವೆಂಕಟಾಚಲಪತಿ ಎಂಬುವವರು ತಹಶೀಲ್ದಾರ್ ಎಡೆದೆ ಚಾಕುವಿನಿಂದ ಇರಿಡಿದ್ದಾರೆ ಗಂಭೀರ ಗಾಯಗೊಂಡ ಬಿ.ಕೆ.ಚಂದ್ರಮೌಳೇಶ್ವರ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next