Advertisement

ಇಂದಿರಾ ಕ್ಯಾಂಟೀನ್‌ಗೆ ಸಿದಗಂಗಾ ಶ್ರೀ  ಹೆಸರಿಡಿ

07:59 PM Apr 02, 2022 | Team Udayavani |

ಬಂಗಾರಪೇಟೆ: ಸಿದ್ಧಗಂಗಾ ಮಠದ ತ್ರಿವಿಧ ದಾಸೋಹ ಡಾ.ಶ್ರೀಶಿವಕುಮಾರ ಸ್ವಾಮೀಜಿ ಜಯಂತಿ ಪ್ರಯುಕ್ತ ಇಂದಿರಾಕ್ಯಾಂಟೀನ್‌ ಹೆಸರನ್ನು ಶ್ರೀ ಶಿವಕುಮಾರ ಸ್ವಾಮೀಜಿ ಕ್ಯಾಂಟೀನ್‌ಆಗಿ ಹೆಸರನ್ನು ಬದಲಾಯಿಸುವ ಮೂಲಕ ಸರ್ಕಾರ ಅವರಿಗೆಗೌರವ ನೀಡಬೇಕು ಎಂದು ಪುರಸಭೆ ಸದಸ್ಯ ಬಿ.ಪಿ.ಮಹೇಶ್‌ಆಗ್ರಹಿಸಿದರು.

Advertisement

ಪಟ್ಟಣದ ಕುವೆಂಪು ವೃತ್ತದಲ್ಲಿ ವೀರಶೈವ ಸಮುದಾಯದಿಂದನಡೆದ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕು ಮಾರ ಸ್ವಾಮೀಜಿಜಯಂತಿ ಪ್ರಯುಕ್ತ ಅನ್ನದಾನ, ಬಡ ವಿದ್ಯಾರ್ಥಿಗಳಿಗೆ ಲೇಖನಿಸಾಮಗ್ರಿ ವಿತರಿಸಿ ಮಾತನಾಡಿ, ಡಾ.ಶ್ರೀಶಿವಕುಮಾರ ಸ್ವಾಮೀಜಿಅವರು ಹಸಿದವರಿಗೆ ಅನ್ನ ಹಾಕುತ್ತಿ ದ್ದರು. ಬಡ ಮಕ್ಕಳಿಗೆ ಶಿಕ್ಷಣನೀಡುವ ಮೂಲಕ ಭೇದಭಾವವಿಲ್ಲದೆ ಎಲ್ಲರ ಹೃದಯಗೆದ್ದಿದ್ದರು ಎಂದರು.ಡಾ.ಶ್ರೀಶಿವಕುಮಾರ ಸ್ವಾಮೀ ಜಿಗಳು ತುಮಕೂರಿನಸಿದ್ಧಗಂಗಾ ಮಠದಲ್ಲಿ ನಿತ್ಯ ದಾಸೋಹ ಮಾಡಿಹೆಸರುಗಳಿಸಿದ್ದರು. ಇಂತಹ ಮಹಾನ್‌ ವ್ಯಕ್ತಿಯ ಹೆಸರುಶಾಶ್ವತವಾಗಿ ಉಳಿಯಲು ರಾಜ್ಯದೆಲ್ಲೆಡೆ ಇರುವ ಇಂದಿರಾಕ್ಯಾಂಟೀನ್‌ ಹೆಸರನ್ನು ಶ್ರೀಶಿವಕುಮಾರ ಸ್ವಾಮೀಜಿ ಕ್ಯಾಂಟೀನ್‌ಆಗಿ ಬದಲಾಯಿಸಬೇಕು.

ಸರ್ಕಾರ ಈ ಬಗ್ಗೆ ಗಂಭೀರವಾಗಿಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.ಶ್ರೀಶಿವಕುಮಾರ ಸ್ವಾಮೀಜಿ ಕೇವಲ ಪರಮಪೂಜ್ಯರಲ್ಲ,ಬದುಕಿಗೆ ದಾರಿ ತೋರಿದ ಹಾಗೂ ಬದುಕು ಕಟ್ಟಿಕೊಟ್ಟಮಹಾನ್‌ ಸಾಧಕರಾಗಿದ್ದಾರೆ. ಸ್ವಾಮೀಜಿ ಅವರಲ್ಲಿ ದೈವಶಕ್ತಿಇತ್ತು. ಶ್ರದ್ಧೆ, ನಿಷ್ಟೆ ಹಾಗೂ ಪರಿಶ್ರಮ ಅವರ ಧ್ಯೇಯವಾಗಿತ್ತು.ಅದನ್ನು ಪರಿಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದರು.ವೀರಶೈವ ಸಮಾಜದ ಅಧ್ಯಕ್ಷ ಸದಾಶಿವಯ್ಯ,ರಂಗರಾಮಯ್ಯ, ಬಿ.ಜಿ.ನಂಜಪ್ಪ, ಶಿಕ್ಷಕ ಮಂಜುನಾಥ್‌, ಬಳೆಅಂಗಡಿ ಮಂಜುನಾಥ್‌, ವಿಜಿಕುಮಾರ್‌, ಸ್ವಾಮಿಕಣ್ಣುಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next