Advertisement

Bangalore Rameshwaram Cafe Case ಶಂಕಿತ ಉಗ್ರನಿಗಾಗಿ ಬೀದರ್‌ನಲ್ಲೂ ಪೊಲೀಸರಿಂದ ಶೋಧ

11:16 PM Mar 08, 2024 | Team Udayavani |

ಬೀದರ್‌: ಬೆಂಗಳೂರು ಬಾಂಬ್‌ ಸ್ಫೋಟ ಪ್ರಕರಣದ ಶಂಕಿತ ಉಗ್ರ ಜಿಲ್ಲೆಯ ಹುಮನಾಬಾದ್‌ ಮೂಲಕ ಮಹಾರಾಷ್ಟ್ರದ ಪುಣೆಗೆ ತೆರಳಿದ್ದಾನೆಂಬ ಶಂಕೆ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಪೊಲೀಸರು ಶೋಧ ನಡೆಸಿದರು.

Advertisement

ಬೆಂಗಳೂರಿನಿಂದ ಹುಮನಾ ಬಾದ್‌ಗೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ಬಸ್‌ ನಿಲ್ದಾಣ, ಲಾಡ್ಜ್ ಗಳಲ್ಲಿ ಎರಡೂ¾ರು ದಿನಗಳ ಸಿಸಿ ಟಿವಿ ತುಣುಕುಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ ಎನ್ನಲಾಗಿದೆ.

ಜತೆಗೆ ಬೀದರ್‌ ನಗರ ಸಹಿತ ಜಿಲ್ಲೆಯ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್‌ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಆದರೆ ಶಂಕಿತ ವ್ಯಕ್ತಿ ಹುಮನಾಬಾದ್‌ಗೆ ಬಂದಿರುವ ಬಗ್ಗೆ ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅ ಧಿಕಾರಿಗಳು ಶೋಧ ಕಾರ್ಯ ನಡೆಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next