Advertisement

ಛಾವಣಿ ಕುಸಿತ; ಇಬ್ಬರು ಕಾರ್ಮಿಕರ ಸಾವು, ಮುಂದುವರಿದ ರಕ್ಷಣಾ ಕಾರ್ಯ

03:32 PM Dec 13, 2018 | Sharanya Alva |

ಬೆಂಗಳೂರು: ಲಾಜಿಸ್ಟಿಕ್ಸ್ ಕಂಪನಿಯ ಗೋದಾಮಿನಲ್ಲಿ ಕುಸಿದು ಬಿದ್ದ ರಾಕ್ ನಡಿ ಸಿಲುಕಿದ್ದ ಇಬ್ಬರು ಕಾರ್ಮಿಕರು ಕೊನೆಯುಸಿರೆಳೆದಿದ್ದು, ಇನ್ನೊಬ್ಬ ಕಾರ್ಮಿಕನ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಗರದ ಕಾಡುಗೋಡಿಯ ಶೀಗೆಹಳ್ಳಿ ಗೇಟ್ ಸಮೀಪದ ಲಾಜಿಸ್ಟಿಕ್ ಕಂಪನಿಯ ಗೋದಾಮಿನಲ್ಲಿ ಬಟ್ಟೆ, ಆಹಾರವಸ್ತುಗಳನ್ನು ಇಟ್ಟಿದ್ದ ಕಬ್ಬಿಣದ ಛಾವಣಿ ಕುಸಿದು ಬಿದ್ದ ಪರಿಣಾಮ, ಕಾರ್ಮಿಕರು ಅದರಡಿ ಸಿಲುಕಿದ್ದರು.

ಫಾರೂಕ್ ಹಾಗೂ ಸುಭಾಷ್ ಎಂಬ ಇಬ್ಬರು ಕಾರ್ಮಿಕರ ಮೃತದೇಹವನ್ನು ಹೊರತೆಗೆಯಲಾಗಿದೆ. ಛಾವಣಿ ಅಡಿ ಸಿಲುಕಿರುವ ಮತ್ತೊಬ್ಬ ಕಾರ್ಮಿಕ ಜ್ಞಾನ ದರ್ಶನ್ ರಕ್ಷಣೆಗಾಗಿ ಅಗ್ನಿಶಾಮಕ ದಳದ  ಸಿಬ್ಬಂದಿಗಳು ಹರಸಾಹನ ಪಡುತ್ತಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ, ಎನ್ ಡಿಆರ್ ಎಫ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಆದರೂ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next