Advertisement

ನಗರದಲ್ಲಿ ಮುಂದುವರಿದ ತುಂತುರು ಮಳೆ

03:40 PM Jul 22, 2021 | Team Udayavani |

ಬೆಂಗಳೂರು: ನಗರ ಸೇರಿದಂತೆ ಸುತ್ತಮುತ್ತಲ ಹಲವು ಭಾಗಗಳಲ್ಲಿಬುಧವಾರ ತುಂತುತು ಮಳೆ ಮುಂದುವರಿದಿದೆ. ಉಳಿದಂತೆ,ಸಂಜೆ ಬಳಿಕ ಬಹುತೇಕ ಎಲ್ಲ ಭಾಗಗಳಲ್ಲಿ ಮೋಡ ಕವಿದವಾತಾವರಣ ಕಂಡು ಬಂದಿದೆ.

Advertisement

ನಗರದ ಬೊಮ್ಮನಹಳ್ಳಿ, ಹೂಡಿ, ಆರ್‌.ಆರ್‌. ನಗರ,ನಾಗರಭಾವಿ, ಬೇಗೂರು, ಕಾಟನ್‌ಪೇಟೆ, ಸಂಪಂಗಿರಾಮನಗರಸೇರಿಂದತೆಕೆಲವೆಡೆಮಾತ್ರ ಸಾಧಾರಣಮಳೆಯಾಗಿದೆ.ಉಳಿದಂತೆ,ಯಶವಂತಪುರ, ರಾಜಾಜಿನಗರ, ಯಲಹಂಕ, ವಿದ್ಯಾರಣ್ಯಪುರ,ನಾಗಸಂದ್ರ, ಮಹದೇವಪುರ, ಜಕ್ಕೂರು, ಬ್ಯಾಟರಾಯನಪುರ,ಪೀಣ್ಯ, ಅಬ್ಬಿಗೆರೆ, ಅಂಜನಪುರ, ಕೊಟ್ಟಿಗೆಪಾಳ್ಯ, ಕಲ್ಯಾಣನಗರ,ಹೊಯ್ಸಳನಗರ,ಅಗ್ರಹಾರದಾಸರಹಳ್ಳಿ,ದಾಸರಹಳ್ಳಿ, ಶಾಂತಿನಗರ,ಆರ್‌.ಟಿ.ನಗರ, ಬಾಣಸವಾಡಿ, ಜೆ.ಪಿ.ನಗರ, ಸಿಂಗದಂದ್ರ,ಪ್ಯಾಲೆಸ್‌ ಗುಟ್ಟಹಳ್ಳಿ, ಚೊಕ್ಕಸಂದ್ರ, ಬಾಗಲಗುಂಟೆ, ಜಾಲಹಳ್ಳಿಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ.

ಬೆಳಗ್ಗೆ ಮತ್ತುಮಧ್ಯಾಹ್ನ ಬಿಡದೆ ಸುರಿದ ತುಂತುರು ಮಳೆಯಿಂದ ವಾಹನಸವಾರರು ಪರದಾಡಿದ ದೃಶ್ಯಕಂಡುಬಂದಿತು.ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಮಾನ್ಯವಾಗಿಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಕೆಲವೊಮ್ಮೆ ಬಲವಾದಗಾಳಿ ಬೀಸುವ ನಿರೀಕ್ಷಿಯಿದ್ದು, ಗರಿಷ್ಠ ತಾಪಮಾನ 26.4 ಮತ್ತುಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಇರುವ ಹೆಚ್ಚಿನಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next