Advertisement

ಚುಂಚ ಶ್ರೀಗಳ ಭೇಟಿ ಮಾಡಿದ ಅಶೋಕ್‌

07:04 PM Jul 03, 2021 | Team Udayavani |

ಬೆಂಗಳೂರು: ಕಂದಾಯ ಸಚಿವ ಆರ್‌.ಅಶೋಕ್‌ಅವರು ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದರು.

Advertisement

ಸಚಿವ ಬಸವರಾಜ ಬೊಮ್ಮಾಯಿ ಅಶೋಕ್‌ಅವರ ಜತೆ ಇದ್ದದ್ದು ಕುತೂಹಲ ಮೂಡಿಸಿದೆ.ಇಬ್ಬರೂ ನಾಯಕರು ಸುಮಾರು ಹೊತ್ತು ಶ್ರೀಗಳಜತೆ ಸಮಾಲೋಚನೆ ನಡೆಸಿದರು.

ಇದಕ್ಕೂ ಮುನ್ನ ಬಸವರಾಜ ಬೊಮ್ಮಾಯಿ ಹಾಗೂ ಅಶೋಕ್‌ ಮುಖ್ಯಮಂತ್ರಿ ಯಡಿಯೂರಪ್ಪಅವರ ಜತೆ ಚರ್ಚಿಸಿ ನಂತರ ಮಠಕ್ಕೆ ಭೇಟಿನೀಡಿದ್ದು ವಿಶೇಷ. ಶನಿವಾರ ಅಥವಾ ಭಾನುವಾರಇಬ್ಬರು ಸಚಿವರು ಸುತ್ತೂರು ಮಠಕ್ಕೆ ಸಹ ಭೇಟಿ ನೀಡಲಿದ್ದಾರೆ.

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಸಂದೇಶವಾಹಕರಾಗಿ ಭೇಟಿ ಮಾಡುತ್ತಿದ್ದಾರೆ ಎಂಬಮಾತುಗಳುಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next