Advertisement

ನಮ್ಮಲ್ಲಿ ಯಾವುದೇ ಬಣಗಳಿಲ್ಲ

02:26 PM Jun 16, 2021 | Team Udayavani |

ಬೆಂಗಳೂರು: ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ಯಾರೇ ಗುಂಪು ಮಾಡಿ ಕೊಂಡರೂಅದಕ್ಕೆ ಮನ್ನಣೆ ಇಲ್ಲ ಎಂದು ಉಪ ಮುಖ್ಯ ಮಂತ್ರಿಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮ ಗಳೊಂದಿಗೆಮಾತನಾಡಿ, ನಮ್ಮಪಕ್ಷದಲ್ಲಿ ಯಾವುದೇಬಣಗಳಿಗೆ ಅವಕಾಶ ಇಲ್ಲ. ನಮ್ಮಲ್ಲಿ ಬಿಜೆಪಿ ಬಣಬಿಟ್ಟರೆ ಯಾರ ಬಣವೂ ಇಲ್ಲ. ಇಲ್ಲಿ ಇರುವುದು ಬಿಜೆಪಿ ಬಣ ಮಾತ್ರ. ಯಾರೇ ಗುಂಪುಮಾಡಿಕೊಂಡರೂ ಯಾವುದಕ್ಕೂ ಮನ್ನಣೆ ಇಲ್ಲ.ಇದನ್ನ ಖಡಾಖಂಡಿತವಾಗಿ ಹೇಳುತ್ತೇನೆ ಎಂದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ಎಲ್ಲರ ಜೊತೆಗೆ ಸಭೆ ಮಾಡುತ್ತಾರೆ. ಇದರಲ್ಲೇನೂ ವಿಶೇಷವಿಲ್ಲ. ಸರ್ಕಾರದ ನೀತಿ, ಸರ್ಕಾರದಲ್ಲಿ ಏನು ಸುಧಾರಣೆ ತರಬಹುದು ಎನ್ನುವ ಕುರಿತುಸಲಹೆ ಸೂಚನೆ ಕೊಡಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next