Advertisement

ಬೆಂಗಳೂರು-ಮಂಗಳೂರು ರೈಲು ಇನ್ನೆರಡು ದಿನಗಳಲ್ಲಿ ಪುನರಾರಂಭ‌?

09:08 AM Aug 23, 2019 | Team Udayavani |

ಸುಬ್ರಹ್ಮಣ್ಯ: ಘಾಟಿ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ಮಂಗಳೂರು-ಬೆಂಗಳೂರು ನಡುವಿನ ರೈಲು ಮಾರ್ಗದ ಹಲವು ಕಡೆಗಳಲ್ಲಿ ಹಳಿ ಮೇಲೆ ಗುಡ್ಡ ಕುಸಿದು ಬಿದ್ದು ಹಳಿಗಳಿಗೆ ಉಂಟಾದ ಹಾನಿಯ ದುರಸ್ತಿ ಕಾರ್ಯ ಕೊನೆಯ ಹಂತಕ್ಕೆ ತಲುಪಿದ್ದು ಆ. 25ರಿಂದ ರೈಲು ಓಡಾಟ ಪುನರಾರಂಭವಾಗುವ ಸಾಧ್ಯತೆಯಿದೆ.

Advertisement

5 ಕಡೆ ದೊಡ್ಡ ಪ್ರಮಾಣದ ಹಾನಿಯಾಗಿತ್ತು. ನಾಲ್ಕು ಕಡೆ ದುರಸ್ತಿ ಮುಕ್ತಾಯವಾಗಿದೆ. ಆದರೆ ಎಡಕುಮೇರಿ ಸಮೀಪ 63/500 ಕಿ.ಮೀ. ವ್ಯಾಪ್ತಿಯಲ್ಲಿ ಗುಡ್ಡ ಜರಿದು ಹಳಿಯೇ ಕೊಚ್ಚಿ ಹೋದ ಕಡೆ ಮಾತ್ರ ಕೊನೆ ಹಂತದ ಕಾಮಗಾರಿ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಅದು ಮುಕ್ತಾಯವಾಗಲಿದ್ದು ಆ. 25ರಿಂದ ಮಾರ್ಗ ಸಂಚಾರಕ್ಕೆ ಮುಕ್ತವಾಗುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

ರೈಲು ಸಂಚಾರ ರದ್ದು
ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆ. 24ರಂದು ರದ್ದಾಗಿದೆ. ಕಣ್ಣೂರು/ಕಾರವಾರ- ಕೆಎಸ್‌ಆರ್‌ ಬೆಂಗಳೂರಿಗೆ ತೆರಳುವ ಎಕ್ಸ್‌ಪ್ರೆಸ್‌ ರೈಲು ಆ. 23 ಮತ್ತು 24ರಂದು ಸಂಪೂರ್ಣ ರದ್ದಾಗಿದೆ. ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು/ಕಾರವಾರ ತೆ‌ಳುವ ಎಕ್ಸ್‌ಪ್ರೆಸ್‌ ರೈಲು ಆ. 23 ಮತ್ತು 24ರಂದು ರದ್ದಾಗಿದೆ. ಯಶವಂತ ಪುರ-ಮಂಗಳೂರು ಜಂಕ್ಷನ್‌ ತೆರಳುವ ಎಕ್ಸ್‌ಪ್ರೆಸ್‌ ರೈಲು ಆ. 25ರಂದು ರದ್ದಾಗಿದೆ. ಯಶವಂತಪುರ- ಮಂಗಳೂರು ಎಕ್ಸ್‌ಪ್ರೆಸ್‌ ರೈಲು ಸಂಚಾರ ಆ. 25ರಂದು ರದ್ದಾಗಿದೆ. ಕಾರವಾರ-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಸಂಚಾರವು ಆ. 25ರಂದು ಭಾಗಶಃ ರದ್ದಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next