Advertisement

Bangalore: ಪಟಾಕಿ ಸಿಡಿದು 16 ಮಂದಿ ಕಣ್ಣಿಗೆ ಗಾಯ

11:39 AM Nov 13, 2023 | Team Udayavani |

ಬೆಂಗಳೂರು: ನಗರದಲ್ಲಿ ಪಟಾಕಿ ಅವಘಡಗಳಿಂದ ಕಣ್ಣಿನ ತೊಂದರೆ ಒಳಗಾದ ಕೆಲ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಹೆಚ್ಚಿನ ಪ್ರಕರಣಗಳು ಬೇರೆಯವರು ಸಿಡಿಸಿದ ಪಟಾಕಿಯಿಂದ ಕಣ್ಣಿನ ತೊಂದರೆಗೆ ಒಳಗಾದವರೇ ಹೆಚ್ಚು. ಪಟಾಕಿ ಸಿಡಿತದಿಂದ ಕಣ್ಣಿನ ತೊಂದರೆಗೊಳಗಾಗಿ ನಾರಾಯಣ ನೇತ್ರಾಯಲಯಕ್ಕೆ ಭಾನುವಾರ 16 ಮಂದಿ ದಾಖಲಾಗಿದ್ದಾರೆ.

Advertisement

ಇದರಲ್ಲಿ 25-30ವರ್ಷದೊಳಗಿನ ಟೈಲರ್‌ ಹಾಗೂ 19ವರ್ಷದ ಯುವಕನಿಗೆ ಯಾರೋ ಸಿಡಿಸಿದ ಪಟಾಕಿ ಕಣ್ಣಿಗೆ ಬಿದ್ದು, ಕಣ್ಣಿನಲ್ಲಿ ರಕ್ತ ಸ್ರಾವ ಉಂಟಾಗಿದೆ. ಅದೇ ರೀತಿಯಾಗಿ ಅಂಗಳದಲ್ಲಿ ಆಟವಾಡುತ್ತಿರುವ ಮಗುವಿನ ಕಣ್ಣಿಗೆ ಬೇರೆಯವರು ಸಿಡಿಸಿದ ಪಟಾಕಿಯಿಂದ ಕಣ್ಣಿಗೆ ಹಾನಿಯುಂಟಾಗಿದೆ.

ಇದರ ಹೊರತಾಗಿಯೂ ಸಣ್ಣ ಪಟ್ಟ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್‌ ಶೆಟ್ಟಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next