Advertisement

ಸೂರ್ಯ-ಚಂದ್ರ ಕಂಬಳ: ಚಾನ್ಸ್‌ ಓಟದಲ್ಲಿ ಸುರೇಶ್‌ ಹೊಸ ದಾಖಲೆ

10:28 AM Mar 09, 2020 | sudhir |

ಬೆಳ್ತಂಗಡಿ: ಜಾನಪದ ಕ್ರೀಡೆ ಕಂಬಳ ಕರೆಯಲ್ಲಿ ದಾಖಲೆ ಬರೆದಿದ್ದ ಅಶ್ವತ್ಥಪುರ ಶ್ರೀನಿವಾಸ ಗೌಡ, ನಿಶಾಂತ್‌ ಗೌಡ ಅವರಂತೆ ಶನಿವಾರ ನಡೆದ ಬಂಗಾಡಿ, ಕೊಲ್ಲಿ ಸೂರ್ಯಚಂದ್ರ ಜೋಡುಕರೆ ಕಂಬಳದಲ್ಲಿ ಹೊಕ್ಕಾಡಗೋಳಿ ಹಕ್ಕೇರಿ ಸುರೇಶ್‌ ಅವರು ಚಾನ್ಸ್‌ ಓಟದಲ್ಲಿ ದಾಖಲೆ ಮಾಡಿ ಗಮನ ಸೆಳೆದಿದ್ದಾರೆ.

Advertisement

ಶನಿವಾರ ನೇಗಿಲು ಹಿರಿಯ ವಿಭಾಗದಲ್ಲಿ ಬೋಳದ ಗುತ್ತು ಸತೀಶ್‌ ಎ. ಶೆಟ್ಟಿ ಯಜಮಾನರ ಕೋಣವನ್ನು ಚಾನ್ಸ್‌ ಓಟದಲ್ಲಿ ಓಡಿಸಿದ ಹಕ್ಕೇರಿ ಸುರೇಶ್‌ ಎಂ. 124 ಮೀಟರ್‌ ದೂರವನ್ನು 11.64ಸೆ.ನಲ್ಲಿ ಕ್ರಮಿಸಿ 100 ಮೀ. ತುಲನೆ ಮಾಡಿದಾಗ (9.38)ಸೆಕೆಂಡ್‌ ಗಳಲ್ಲಿ ದೂರವನ್ನು ಕ್ರಮಿಸಿದ್ದಾರೆ.

ಇದೇ ಕರೆಯಲ್ಲಿ ಹಗ್ಗಹಿರಿಯ ವಿಭಾಗದಲ್ಲಿ ಕೊಳಚ್ಚಾರು ಕಂಡೆಟ್ಟು ಸುಕುಮಾರ್‌ ಶೆಟ್ಟಿ ಎ. ಯಜಮಾನಿಕೆಯ ಕೋಣವನ್ನು ಇರುವತ್ತೂರು ಆನಂದ ಕೊಳಕ್ಕೆ ಅವರು 11.84 ರಲ್ಲಿ ಕ್ರಮಿಸುವ ಮೂಲಕ 100 ಮೀ. ಪರಿಗಣಿಸಿದಾಗ (9.54) ಸೆಕೆಂಡ್‌ ನಲ್ಲಿ ಓಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next