Advertisement

ಬಾಂಧವ್ಯ ಬ್ಲಡ್ ಕರ್ನಾಟಕದಿಂದ ಉಚಿತ ನೋಟ್ ಪುಸ್ತಕ ವಿತರಣೆ

08:57 PM Jul 04, 2018 | Karthik A |

ಬಾಂಧವ್ಯ ಬ್ಲಡ್ ಕರ್ನಾಟಕ ಎಂಬ ವಾಟ್ಸ್ಯಾಪ್ ಗ್ರೂಪ್ ಮುಖಾಂತರ ರಕ್ತದಾನ ಸಹಿತ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿರುವ ಬಾಂಧವ್ಯ ಬಳಗದ ವತಿಯಿಂದ ಪಾಂಡೇಶ್ವರ ಹಿ. ಪ್ರಾ . ಶಾಲೆಯ 78 ಬಡ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಬಕ್ ವಿತರಣೆ ಮಾಡಲಾಯಿತು. ಮಾತ್ರವಲ್ಲದೇ ಇದೇ ಶಾಲೆಗೆ ಒಂದು ವರ್ಷಕ್ಕೆ ಬೇಕಾಗುವಷ್ಟು ಎಲ್ಲಾ ಸ್ಟೇಷನರಿ ಸಾಮಾಗ್ರಿಗಳನ್ನು ನೀಡಲಾಯಿತು. ಈ ಯೋಜನೆಯ ಸಾಕಾರಕ್ಕೆ ಅಗತ್ಯವಿದ್ದ ಮೊತ್ತವನ್ನು ಬಾಂಧವ್ಯ ಬ್ಲಡ್ ಗ್ರೂಪ್ ನ ಸದಸ್ಯರೊಬ್ಬರು ನೀಡಿದರು.

Advertisement

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಈಜು ಪಟು ಗೋಪಾಲ್ ಕಾರ್ವಿ, ಅವಿನಾಶ್ ಕಾಮತ್, ಸಾಕ್ಷಿ ಕಾಮತ್, ಬಾಂಧವ್ಯ ಬ್ಲಡ್ ನ ಸ್ಥಾಪಕಾಧ್ಯಕ್ಷ ದಿನೇಶ್ ಬಾಂಧವ್ಯ ಕಾರ್ಯದರ್ಶಿ ಸುದೀರ್ ಪೂಜಾರಿ, ಜೇನಿವೀವ್ ಲೂವಿಸ್, ಕೃಷ್ಣ ಪೂಜಾರಿ, ಅಭಿಜಿತ್, ರಾಯನ್ ಪೇರ್ನಾಂಡಿಸ್, ಲೀಲಾವತಿ, ಸುಮಿತ್ರಾ , ಮತ್ತಿತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next