Advertisement

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

11:45 PM May 19, 2022 | Team Udayavani |

ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿ ನಗರ ಮತ್ತು ಸುತ್ತಮುತ್ತಲೀನ ಗ್ರಾಮೀಣ ಪ್ರದೇಶದಲ್ಲಿ ಗುರುವಾರ ಸಂಜೆ 2 ಗಂಟೆಗಳಿಗಿಂತ ಹೆಚ್ಚು ಕಾಲ ಮಿಂಚು ಗುಡುಗುಗಳೊಂದಿಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು.

Advertisement

ಮಳೆಯಿಂದಾಗಿ ನಗರದ ಪ್ರಮುಖ ಬೀದಿಗಳು ನೀರಿನಿಂದಾಗಿ ಜಲಾವೃತವಾಗಿರುವುದರ ಜೊತೆಗ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಗುರುವಾರ ಬೆಳ್ಳಿಗ್ಗೆಯಿಂದ ಜಿಟಿ ಜಿಟಿ ಮಳೆ ಇತ್ತು. ಸಂಜೆ ಸುರಿದ ಬಾರಿ ಮಳೆಯಿಂದಾಗಿ ನಗರದಲ್ಲಿ ತಂಪೆರೆದ ವಾತಾವರಣ ನಿರ್ಮಾಣಗೊಂಡಿದೆ. ಈ ಭಾಗದ ಜನರು ಸಾಕಷ್ಟು ಬೀಸಿಲಿನಿಂದ ಬಸವಳಿದಿದ್ದು, ಈಗ ಸುರಿದ ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ.

ಈಗಾಗಲೇ ಈ ಭಾಗದ ಸಾಕಷ್ಟು ರೈತರು ಬಿತ್ತನೆಯನ್ನು ಪ್ರಾರಂಭಿಸಿದ್ದು ಕೆಲವು ಜನರು ನಾಟಿ ಕಾರ್ಯ ಮುಗಿಸಿದ್ದಾರೆ. ಈಗ ಸುರಿದ ಮಳೆಯು ಅತ್ಯವಶ್ಯಕವಾಘಿ ಬೇಕಾಗಿತ್ತು. ಬೇಸಿಗೆಯಿಂದಾಗಿ ಬಾವಿ ಮತ್ತು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕೂಡಾ ಕಡಿಮೆಯಾಗಿತ್ತು. ಈ ಮಳೆಯಿಂದಾಗಿ ಭೂಮಿಗೆ ಸಾಕಷ್ಟು ನೀರು ಬಂದಿದ್ದು ರೈತರಲ್ಲಿ ಮಂದಹಾಸ ಮೂಡಿದೆ ಎಂದು ರೈತರಾದ ಸಿದ್ದು ಗೌಡಪ್ಪನವರ ತಿಳಿಸಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next