Advertisement

Plastic ಸಮುದ್ರ ಸೇರ್ಪಡೆಗೆ ತಡೆ: 840 ಕೋ.ರೂ.ಕೆ-ಶೋರ್‌-ಬ್ಲೂ ಪ್ಯಾಕ್‌ ಯೋಜನೆ: ಖಂಡ್ರೆ

01:51 AM Aug 09, 2023 | Team Udayavani |

ಬೆಂಗಳೂರು: ಕಡಲ ಒಡಲು ಸೇರಿ ತೀರವನ್ನು ಆವರಿಸು ತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯ ಜಲಚರಗಳ ಸಾವಿಗೆ ಕಾರಣ ವಾಗುತ್ತಿದ್ದು, ಸಮುದ್ರಕ್ಕೆ ಪ್ಲಾಸ್ಟಿಕ್‌ ಸೇರದಂತೆ ನಿಗ್ರಹಿಸುವುದು ಹಾಗೂ ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ವಿಶ್ವಬ್ಯಾಂಕ್‌ ಪ್ರಸ್ತಾವಿತ ಕೆ-ಶೋರ್‌- ಬ್ಲೂಪ್ಯಾಕ್‌ ಯೋಜನೆಯಡಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದರು.

Advertisement

ಹಿರಿಯ ಪರಿಸರ ಅರ್ಥಶಾಸ್ತ್ರಜ್ಞ ಪಾಬ್ಲೋ ಸಿ. ಬೆನಿಟೆಜ್‌ ನೇತೃತ್ವದ ವಿಶ್ವಬ್ಯಾಂಕ್‌ ನಿಯೋಗ ದೊಂದಿಗೆ ಸಚಿವರು ಸಮಾ ಲೋಚನೆ ನಡೆಸಿದ ಬಳಿಕ ಈ ಸೂಚನೆ ನೀಡಿದರು. ರಾಜ್ಯದ 317 ಕಿ.ಮೀ. ಕರಾವಳಿಯಲ್ಲಿ ಪ್ರತಿನಿತ್ಯ 50 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂಬುದು ಆಘಾತಕಾರಿ. ಇದರಿಂದ ಜಲಚರಗಳ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತಿದೆ ಎಂಬ ಬಗ್ಗೆ ಸಚಿವರು ಖೇದ ವ್ಯಕ್ತಪಡಿಸಿದರು.

ಏಕಬಳಕೆ ಪ್ಲಾಸ್ಟಿಕ್‌ ನಿಯಂತ್ರಣ ಅಗತ್ಯ
ಮಾನವರ ಮತ್ತು ಸಮಸ್ತ ಜೀವಸಂಕುಲದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿರುವ ಏಕ ಬಳಕೆ ಪ್ಲಾಸ್ಟಿಕ್‌ ನಿಯಂತ್ರಿಸುವ ಅಗತ್ಯ ಇದೆ ಎಂದು ಪ್ರತಿಪಾದಿಸಿದ ಸಚಿವರು, ಕರಾವಳಿ ಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದ ದುಷ್ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿ ಎಂದರು.

ಅರಣ್ಯ ಮತ್ತು ಪರಿಸರ ಇಲಾಖೆಯ ಉನ್ನತಾಧಿಕಾರಿ ಗಳಾದ ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌ ಮತ್ತು ವಿಜಯ ಮೋಹನ್‌ ರಾಜ್‌ ಭಾಗಿಯಾಗಿದ್ದರು.

ಶೇ. 70 ವಿಶ್ವಬ್ಯಾಂಕ್‌ ಸಾಲ
ಬ್ಲೂ ಪ್ಯಾಕ್‌ ಯೋಜನೆಯ ಒಟ್ಟು ಮೊತ್ತ 840 ಕೋಟಿ ರೂ. ಆಗಿದ್ದು, ಇದರಲ್ಲಿ ಶೇ. 70ರಷ್ಟನ್ನು ವಿಶ್ವಬ್ಯಾಂಕ್‌ ಸಾಲದ ರೂಪದಲ್ಲಿ ನೀಡಲಿದೆ. ರಾಜ್ಯ ಸರಕಾರ ಶೇ. 30ರಷ್ಟು ಭರಿಸಬೇಕಾಗುತ್ತದೆ. ಪ್ರಾಥಮಿಕ ಯೋಜನಾ ವರದಿ (ಪಿಪಿಆರ್‌)ಗೆ ನೀತಿ ಆಯೋಗ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಬೆಂಬಲವಿದೆ ಎಂದು ಅಧಿಕಾರಿಗಳು ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next