Advertisement

ಆಧಾರ್‌ ಸಂಖ್ಯೆ ಜೋಡಣೆಗೆ ಸೂಚನೆ

06:16 PM Feb 05, 2021 | Team Udayavani |

ಸಿರುಗುಪ್ಪ: ತಾಲೂಕಿನಲ್ಲಿ ಒಟ್ಟು 1,26,532 ರೈತರ ಜಮೀನಿನ ಪ್ಲಾಟ್‌ಗಳಿದ್ದು, ಮುಂಗಾರು ಹಂಗಾಮಿನಲ್ಲಿ 40,145 ರೈತರ ಪ್ಲಾಟ್‌ಗಳಿಗೆ ಆಧಾರ್‌ಕಾರ್ಡ್‌ ಸಂಖ್ಯೆ ಜೋಡಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಜೀರ್‌ ಅಹಮ್ಮದ್‌ ತಿಳಿಸಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್‌ ಎಸ್‌.ಬಿ.ಕೂಡಲಗಿ ಅಧ್ಯಕ್ಷತೆಯಲ್ಲಿ ನಡೆದ ಹಿಂಗಾರು ಬೆಳೆ ಸಮೀಕ್ಷೆ ಸಭೆಯಲ್ಲಿ ಮಾತನಾಡಿದ ಅವರು, ಹಿಂಗಾರು ಹಂಗಾಮಿನಲ್ಲಿ ಒಟ್ಟು 12,208 ರೈತರ ಜಮೀನಿನ ಪ್ಲಾಟ್‌ಗಳಿಗೆ ಆಧಾರ್‌ ಕಾರ್ಡ್‌ ಸಂಖ್ಯೆ ಜೋಡಣೆ ಮಾಡಲಾಗಿದ್ದು, ಇನ್ನು 74,179 ರೈತರ ಜಮೀನಿನ ಪ್ಲಾಟ್‌ಗಳಿಗೆ ಆಧಾರ್‌ ಕಾರ್ಡ್‌ ಸಂಖ್ಯೆ ಜೋಡಣೆ ಮಾಡುವ ಕಾರ್ಯ ಬಾಕಿಯಿದೆ. ಇನ್ನೂ ನಾಲ್ಕು ದಿನದೊಳಗೆ
ರೈತರ ಎಲ್ಲ ಜಮೀನಿನ ಪ್ಲಾಟ್‌ಗಳಿಗೆ ಆಧಾರ್‌ಕಾರ್ಡ್‌ ಸಂಖ್ಯೆಯನ್ನು ಜೋಡಣೆ ಮಾಡಲು ಕಂದಾಯ ಅ ಧಿಕಾರಿಗಳು, ಗ್ರಾಮಲೆಕ್ಕಾ ಧಿಕಾರಿಗಳು, ಕೃಷಿ ಅ ಧಿಕಾರಿಗಳು, ತೋಟಗಾರಿಕೆ ಇಲಾಖೆ ಅ ಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ರೈತರ ಜಮೀನಿನ ಪ್ಲಾಟ್‌
ಗಳಿಗೆ ಆಧಾರ್‌ ಕಾರ್ಡ್‌ ಸಂಖ್ಯೆ ಜೋಡಣೆ ಆಗದಿದ್ದರೆ, ಸರ್ಕಾರದಿಂದ ರೈತರಿಗೆ ದೊರೆಯುವ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ ಎಂದರು.

Advertisement

ರೈತರಿಗೆ ಮುಖ್ಯವಾಗಿ ಕೃಷಿ ಇಲಾಖೆಯಿಂದ ದೊರೆಯುವ ಸಹಾಯಧನ, ಅತಿವೃಷ್ಟಿ, ಅನಾವೃಷ್ಟಿಯಿಂದ ಬರುವ ಪರಿಹಾರ ಧನ ಸೇರಿದಂತೆ ವಿವಿಧ ಸೌಲಭ್ಯಗಳು ದೊರೆಯುವುದಿಲ್ಲ, ಆದ್ದರಿಂದ ಎಲ್ಲಾ ಅ ಧಿಕಾರಿಗಳು ಬಾಕಿ ಇರುವ ರೈತರ ಸರ್ವೇ ನಂಬರ್‌ಗಳ ಜಮೀನಿನ ಪ್ಲಾಟ್‌ಗಳಿಗೆ
ಆಧಾರ್‌ ಸಂಖ್ಯೆಯನ್ನು ಜೋಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಸರ್ಕಾರ ನಿಗ ಪಡಿಸಿದ ಅವಧಿಯೊಳಗೆ ಆಧಾರ್‌ ಸಂಖ್ಯೆ ಜೋಡಣೆ ಕಾರ್ಯ ಮುಗಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ತಹಶೀಲ್ದಾರ್‌ ಎಸ್‌.ಬಿ.ಕೂಡಲಗಿ ಮಾತನಾಡಿದರು. ಕಂದಾಯ ಅ ಧಿಕಾರಿ ಬಸವರಾಜ್‌, ಮಂಜುನಾಥ, ಶೆವಲಿ, ಅನಂತಕುಮಾರ್‌ಶೆಟ್ಟಿ, ಗ್ರಾಮಲೆಕ್ಕಾ ಧಿಕಾರಿಗಳಾದ ರಾಮಪ್ಪ, ಎರ್ರಿಸ್ವಾಮಿ, ಪರಮೇಶಪ್ಪ, ವಿರುಪಾಕ್ಷಪ್ಪ, ಶಂಕ್ರಪ್ಪ, ಶ್ರೀಶೈಲ, ಕೃಷಿ ಅ ಧಿಕಾರಿ ಗರ್ಜೆಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next