Advertisement

ಬಿಜೆಪಿ ವಶಕ್ಕೆ ರಾಮಸಾಗರ ಗ್ರಾಪಂ

06:12 PM Feb 05, 2021 | Team Udayavani |

ಕಂಪ್ಲಿ: ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ರಾಮಸಾಗರ ಗ್ರಾಮ ಪಂಚಾಯತಿಯು ಭಾಜಪ ಬೆಂಬಲಿತರ ಪಾಲಾಗಿದ್ದು, ಅಧ್ಯಕ್ಷರಾಗಿ ಶರಣಪ್ಪ ಬೊಮ್ಮಗಂಡಿ ಹಾಗೂ ಉಪಾಧ್ಯಕ್ಷರಾಗಿ ಕೆ.ಯಲ್ಲಮ್ಮ ಆಯ್ಕೆಯಾಗಿದ್ದಾರೆ. 17 ಸದಸ್ಯರನ್ನೊಳಗೊಂಡ ರಾಮಸಾಗರ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಶರಣಪ್ಪ ಬೊಮ್ಮಗಂಡಿ ಮತ್ತು ಪಾರ್ವತಿ ನಾಮಪತ್ರ ಸಲ್ಲಿಸಿದ್ದು, ಶರಣಪ್ಪ ಬೊಮ್ಮಗಂಡಿ 11 ಮತ ಹಾಗೂ ಪಾರ್ವತಿ ಕೆ. 6 ಮತ ಪಡೆದರು. ಉಪಾದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಲ್ಲಮ್ಮ ಕೆ.10 ಮತ ಪಡೆದರೆ ಎ.ಕೆ.ಚೆ„ತ್ರ 7 ಮತ ಪಡೆದರು ಎಂದು ಚುನಾವಣಾಧಿ ಕಾರಿ ಎಂ.ಕಿಶೋರಕುಮಾರ್‌ ಘೋಷಿದರು.
ಶಿರಸ್ತೆದಾರ ರಾಘವೇಂದ್ರ, ಪಿಡಿಒ ಕೆ.ಹನುಮಂತಪ್ಪ, ಕಾರ್ಯದರ್ಶಿ ನಾಗರಾಜರಾವ್‌ ವಿ.ಕೆ. ಸಹಕಾರ ನೀಡಿದರು. ಸದಸ್ಯರಾದ ಸಿಕ್ಲಿ ಸೋಮಪ್ಪ, ಎಸ್‌.ಎಂ.ಸ್ವಪ್ನ, ಬಿ.ಮೌಲಾಸಾಬ್‌, ಸಿ.ವಿರೂಪಾಕ್ಷ, ದುರುಗಮ್ಮ, ಪಾರ್ವತಮ್ಮ ಆನೆ, ಹನುಮಂತಪ್ಪ, ರಾಮಕ್ಕ, ದಾನಶೆಟ್ಟಿ ವಿರೂಪಾಕ್ಷಪ್ಪ, ಬಿ.ಎಂ. ಶಿವಲೀಲಮ್ಮ, ಆಶಾ.ಎಂ., ಆರ್‌.ಎಂ.ರಾಮಯ್ಯ ಮತ್ತು ಯಲ್ಲಮ್ಮ.ಕೆ.ಭಾಗವಹಿಸಿದ್ದರು.

Advertisement

ಓದಿ :ದಮ್ಮೂರು ಗ್ರಾಪಂಗೆ ಪ್ರಕಾಶರೆಡ್ಡಿ ಅಧ್ಯಕ್ಷ

 

Advertisement

Udayavani is now on Telegram. Click here to join our channel and stay updated with the latest news.

Next