Advertisement

ಮಂತ್ರಾಲಯಕ್ಕೆ ಭಕ್ತರ ಪಾದಯಾತ್ರೆ

04:52 PM Jan 29, 2021 | Team Udayavani |

ಸಿರುಗುಪ್ಪ: ತೀರ್ಥ ಕ್ಷೇತ್ರಗಳಿಗೆ, ಪುಣ್ಯಕ್ಷೇತ್ರಗಳಿಗೆ ಪಾದಯಾತ್ರೆಯ ಮೂಲಕ ತೆರಳುವ ಸಂಪ್ರದಾಯ ಪುರಾತನ ಕಾಲದಿಂದಲೂ ನಡೆದು ಕೊಂಡು ಬಂದ ಪದ್ಧತಿಯಾಗಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಕಾಲ್ನಡಿಗೆ ಸಂಪ್ರದಾಯ ಉಳಿದಿರುವುದು ಸಂತಸದ ಸಂಗತಿ ಎಂದು ಶ್ರಿಗುರು ಕಲ್ಲಾಪುರ ಪವಮಾನಾಚಾರ್ಯ ತಿಳಿಸಿದರು.

Advertisement

ನಗರದ ಆರ್ಯವೈಶ್ಯ ಪಾದಯಾತ್ರೆ ಸಮಿತಿ ವತಿಯಿಂದ ಮಂತ್ರಾಲಯಕ್ಕೆ ಹಮ್ಮಿಕೊಂಡಿದ್ದ 25ನೇ ವರ್ಷದ ಭಕ್ತರ ಪಾದಯಾತ್ರೆಗೆ ಗೋವಿಗೆ ಪೂಜೆ ಸಲ್ಲಿಸಿ ಗುರುವಾರ ಬೆಳಗ್ಗೆ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಗುರುರಾಘವೇಂದ್ರರು ಭಕ್ತರು ಬೇಡಿದ ಬೇಡಿಕೆಗಳನ್ನು ಈಡೇರಿಸುವ ಕಲಿಯುಗದ ದೈವವಾಗಿದ್ದಾರೆ. ಆದ್ದರಿಂದಲೇ ಮಂತ್ರಾಲಯ ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಪ್ರತಿವರ್ಷ ಕಾಲ್ನಡಿಗೆ ಮೂಲಕ ತೆರಳುತ್ತಿದ್ದಾರೆ ಎಂದು

ಹೇಳಿದರು.
ಆರ್ಯವೈಶ್ಯ ಪಾದಯಾತ್ರೆ ಸಮಿತಿಯ ಅಧ್ಯಕ್ಷ ಎಚ್‌.ಜೆ. ಹನುಮಂತಯ್ಯ ಮತ್ತು ಪಾದಯಾತ್ರೆಗೆ ತೆರಳುವ ಭಕ್ತರು ಇದ್ದರು.

ಓದಿ : “ಎಂದೆಂದಿಗೂ’ ಮೊದಲ ಪ್ರದರ್ಶನಕ್ಕೆ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next