Advertisement

ಬೇಂದ್ರೆ ಕನ್ನಡ ಸಾಹಿತ್ಯದ ಮೇರು ಶಿಖರ

05:33 PM Jan 28, 2021 | Team Udayavani |

ಕೂಡ್ಲಿಗಿ: ಬೇಂದ್ರೆಯವರು ಮಾತನಾಡುವ ಮಾತುಗಳಲ್ಲಿಯೇ ಅತ್ಯದ್ಭುತ ಕಾವ್ಯಗಳು ಉಗಮವಾಗುತ್ತಿದ್ದವು. ಅವರು ಕನ್ನಡ ಸಾಹಿತ್ಯದ ಮೇರು ಶಿಖರ ಎಂದು ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿ ಡಾ| ಶಾಂತಿನಾಥ
ದಿಬ್ಬದ ನುಡಿದರು.

Advertisement

ಕಾನಾಹೊಸಹಳ್ಳಿಯಲ್ಲಿ ಡಾ| ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಧಾರವಾಡ, ಶಾಂತಿನಿಕೇತನ ವಿದ್ಯಾಸಂಸ್ಥೆ ಹುಲಿಕೆರೆ ಸಹಯೋಗದಲ್ಲಿ ನಡೆದ ಬೇಂದ್ರೆ ಕಾವ್ಯಾನುಭವ ಮತ್ತು ಗೀತ ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ
ಮಾತನಾಡಿದರು.

ಹಿರಿಯ ವಿದ್ವಾಂಸ ಡಾ| ಕೆ.ಆರ್‌. ದುರ್ಗಾದಾಸ್‌ ಮಾತನಾಡಿ, ಬೇಂದ್ರೆ ಕಾವ್ಯದಲ್ಲಿ ದೇಶಿಯತೆ ಕುರಿತು ಮಾತನಾಡಿ, ಬೇಂದ್ರೆ ಸಾಹಿತ್ಯವನ್ನು ಎಲ್ಲ ಆಯಾಮಗಳಲ್ಲಿ ವಿಶ್ಲೇಷಿಸಬಹುದು. ಬೇಂದ್ರೆಯವರ ಬಗ್ಗೆ ಎಷ್ಟು ಪಿಎಚ್‌ಡಿ ಮಾಡಿದರೂ ಅದು ಕಡಿಮೆ ಎಂದರು. ಹಿರಿಯ ವಿದ್ವಾಂಸ ಡಾ| ವೃಷಭೇಂದ್ರಾಚಾರ್‌, ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶಿವಾನಂದ, ಚಿತ್ರನಟ ಆನಂತದೇಶಪಾಂಡೆ ಅವರು ಬೇಂದ್ರೆಯ ರೀತಿಯಲ್ಲಿ ವೇಶ ಧರಿಸಿ ಒಂದು ಗಂಟೆಗೂ ಅ ಧಿಕ ಕಾಲ ಸಾಕ್ಷಾತ್ ಬೇಂದ್ರೆಯಂತೆ ನೆರೆದಿದ್ದ ಸಾಹಿತ್ಯ ಆಸಕ್ತರಿಗೆ ಹಾಡು ಕಾವ್ಯಗಳ ಮೂಲಕ ರಸದೌತಣವನ್ನು ಉಣಬಡಿಸಿದರು.

ಕಾರ್ಯಕ್ರಮದಲ್ಲಿ ಡಾ| ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ| ಡಿ.ಎಂ. ಹಿರೇಮಠ ಕಾರ್ಯಕ್ರಮದಲ್ಲಿ ಸಾಹಿತಿ ಎನ್‌. ಎಂ.ರವಿಕುಮಾರ್‌, ಸಂಡೂರು ಕಸಾಪ ಮಾಜಿ ಅಧ್ಯಕ್ಷ ನಾಗನಗೌಡ, ಸಾವಯವ ಕೃಷಿಕ ಎಚ್‌. ವಿ.ಸಜ್ಜನ್‌, ಶಾಂತಿನಿಕೇತನ ಟ್ರಸ್ಟ್‌ ಅಧ್ಯಕ್ಷ ಎಂ.ಬಿ. ಕಾಶೀಂಸಾಹೇಬ್‌, ಕಾರ್ಯದರ್ಶಿ ಆರ್‌.ರಮೇಶ್‌ ಜಗದೀಶಚಂದ್ರಬೋಸ್‌ ಸೇರಿದ್ದಂತೆ ಹಲವರು ಇದ್ದರು.

ಡಾ| ವೃಷಭೇಂದ್ರಾಚಾರ್‌ ನೇತೃತ್ವದ ಕಲಾವಿದರರಾದ ಕೆ.ವಿರೂಪಾಕ್ಷಪ್ಪ,ಮಲ್ಲಿಕಾರ್ಜುನ, ಪ್ರಕಾಶ್‌ಬಡಿಗೇರ್‌, ಅನುರಾಧಪತ್ತಾರ್‌, ಗೌತಮಕರುಣಾನಿ , ರೋಜಾರಾಣಿ, ಕುಮಾರಸ್ವಾಮಿ, ಕೋಟ್ರೇಶ್‌, ವಿಜಯಕುಮಾರ್‌, ತಿಪ್ಪೇಸ್ವಾಮಿ, ನಂದಿನಿವೀರೇಂದ್ರೆ ಅವರಿಂದ ಬೇಂದ್ರೆ ಗೀತ ಗಾಯನ ಕಾರ್ಯಕ್ರಮ ಜರುಗಿತು.

Advertisement

ಓದಿ : ಮೂಲ ಸೌಲಭ್ಯದೊಂದಿಗೆ ಶೈಕ್ಷಣಿಕ ಪ್ರಗತಿಗೆ ಆದ್ಯತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next