Advertisement

ನಮ್ಮ ಕ್ಲಿನಿಕ್‌ ಮೆಡಿಕಲ್‌ ತಂಡದಿಂದ ಲಸಿಕೆ ವಿತರಣೆ

10:14 PM Jun 28, 2021 | Team Udayavani |

ಬಳ್ಳಾರಿ: ನಗರದ ಗುಗ್ಗರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್‌ ಲಸಿಕಾ ಅಭಿಯಾನವನ್ನು ಭಾನುವಾರ ಹಮ್ಮಿಕೊಳ್ಳಲಾಗಿದ್ದು 18 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಲಸಿಕೆ ನೀಡಲಾಯಿತು. ಬೆಂಗಳೂರಿನ ಯುನೈಟೆಡ್‌ ವೇಸ್‌ ಅಸೋಸಿಯೇಷನ್‌ನ ನಮ್ಮ ಕ್ಲಿನಿಕ್‌ ಮೆಡಿಕಲ್‌ ಟೀಂ ಡಾ| ಋತ್ವಿಕ್‌ ನೇತೃತ್ವದ 9 ಜನ ವೈದ್ಯರ ತಂಡ, ಜಿಲ್ಲಾಡಳಿತದ ಸಲಹೆಯಂತೆ ಲಸಿಕಾಕರಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಜಿಲ್ಲಾ ಆರೋಗ್ಯ ಇಲಾಖೆಗೆ ಸಹಕಾರ ನೀಡಿದರು.

Advertisement

ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಮಾಜ ಸೇವೆ ಹಿನ್ನೆಲೆಯ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಯಂತೆ ನೇರವಾಗಿ ಕೋವಿಡ್‌ ಲಸಿಕೆಯನ್ನು ಖರೀದಿಸಿ ನಮ್ಮ ಕ್ಲಿನಿಕ್‌ ಮೆಡಿಕಲ್‌ ಟೀಂ ಮೂಲಕ ಆಯಾ ಜಿಲ್ಲಾಡಳಿತದ ಜೊತೆ ಚರ್ಚಿಸಿ ತದನಂತರ ಆಯ್ದ ಸ್ಥಳಗಳಲ್ಲಿ ಅದರಲ್ಲೂ ನಗರದ ಸ್ಲಮ್‌ ಪ್ರದೇಶ, ಗ್ರಾಮೀಣ ಭಾಗದಲ್ಲಿ ಬುಡಕಟ್ಟು ಜನವಸತಿ ಪ್ರದೇಶಗಳಲ್ಲಿ ಈ ತಂಡವು ಲಸಿಕೆ ಹಾಕುವ ಉದ್ದೇಶ ಹೊಂದಿದೆ. ಸದ್ಯ ಬಳ್ಳಾರಿ ನಗರದ ಗುಗ್ಗರಹಟ್ಟಿಯಲ್ಲಿ ಕೋವಿಡ್‌ ಲಸಿಕಾ ಕಾರ್ಯ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದ್ದು, ಈ ಪೈಕಿ 493 ಜನರಿಗೆ ನಮ್ಮ ಕ್ಲಿನಿಕ್‌ ಮೆಡಿಕಲ್‌ ತಂಡದವರು ನೀಡಿದ್ದು, ಇನ್ನುಳಿದ 100 ಜನರಿಗೆ ಆರೋಗ್ಯ ಇಲಾಖೆಯಿಂದ ಲಸಿಕೆ ಹಾಕಲಾಯಿತು. ಬೆಳಗ್ಗೆ 9.30 ರಿಂದ ಸಂಜೆವರೆಗೂ ಲಸಿಕೆ ಕಾರ್ಯಕ್ರಮ ನಡೆಯಿತು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರು ತಿಳಿಸಿರು.

ಆಟೋದಲ್ಲೇ ಲಸಿಕೆ ನೀಡಿಕೆ: ಕಾರ್ಯಕ್ರಮದ ವೇಳೆ ಮೂಳೆ, ಕ್ಷಯರೋಗದಿಂದ ಬಳಲುತ್ತಿದ್ದ ಗುಗ್ಗರಹಟ್ಟಿಯ ನಿವಾಸಿ ವಿರೇಶ ಎನ್ನುವವರು ನಡೆಯಲು ಆಗದಿದ್ದರೂ ಲಸಿಕೆ ಹಾಕಿಸಿಕೊಳ್ಳಲು ಆಟೋದಲ್ಲಿ ತಮ್ಮ ಪತ್ನಿಯೊಂದಿಗೆ ಬಂದರು.

ಅವರ ನೋಂದಣಿ ಪ್ರಕಿಯೆಯನ್ನು ಪೂರ್ಣಗೊಳಿಸಿ ಆಟೊದಲ್ಲಿಯೇ ಅವರಿಗೆ ವೈದ್ಯಕೀಯ ಸಿಬ್ಬಂದಿ ಲಸಿಕೆ ನೀಡಿ ವಾಪಸ್‌ ಕಳುಹಿಸಿಕೊಟ್ಟರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ತ್ರಿವೇಣಿ, ವೈದ್ಯಾಧಿಕಾರಿ ಡಾ| ಶಗುಪ್ತಾ ಶಾಹೀನ್‌, ಮುಖಂಡರಾದ ಸೂರಿ, ಕೆ. ಶ್ರೀಕಾಂತ, ಕೆ.ಹೊನ್ನೂರಸ್ವಾಮಿ, ತಿಪ್ಪೇಸ್ವಾಮಿ, ಕೆ. ಪ್ರಹ್ಲಾದ ಮತ್ತು ಯುವ ಪದಾ ಧಿಕಾರಿಗಳು ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ಶಾಂತಮ್ಮ, ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಯಶೋದಾ, ಜಿಲಾನ್‌, ಸರಳಾ ಕುಮಾರಿ, ಉಮಾಮಹೇಶ್ವರಿ, ಅರುಣಾ ನಿರಂಜನ, ಎರ್ರಿಸ್ವಾಮಿ, ದೇವರಾಜ, ನಾಗವೇಣಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next