Advertisement

ಸುಡುಗಾಡು ಸಿದ್ಧರ ಸಂಕಷ್ಟಕ್ಕೆ ಸ್ಪಂದಿಸಲು ಮನವಿ

10:08 PM May 17, 2021 | Team Udayavani |

ಸಂಡೂರು: ಚೋರುನೂರು ಗ್ರಾಮದ ಹೊರವಲಯದಲ್ಲಿ ನಿತ್ಯ ಕೂಲಿ ಮತ್ತು ಭಿಕ್ಷೆ ಬೇಡಿ ಬದುಕುವಂತಹ ಸುಡುಗಾಡು ಸಿದ್ಧರ 100ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ಸಹಾಯ ಹಸ್ತಕ್ಕಾಗಿ ಮನವಿ ಮಾಡಿದ್ದಾರೆ.

Advertisement

ನಿತ್ಯ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದೇವೆ. ಚೋರುನೂರು ಹೊರವಲಯದಲ್ಲಿ ಜೋಪಡಿಗಳಲ್ಲಿ ವಾಸಿಸುತ್ತಿದ್ದು ಕೊರೊನಾ ಕರ್ಫ್ಯೂನಿಂದಾಗಿ ಕೂಲಿ ಮಾಡಲು ಅಗದೇ ಭಿಕ್ಷೆ ಎತ್ತಲೂ ಆಗದೆ ಸಂಕಷ್ಟದಲ್ಲಿದ್ದೇವೆ. ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು ಎಂದು ಜೋಗ್ಯಾರು ಹರೀಶ್‌ ಮನವಿ ಮಾಡಿದ್ದಾರೆ.

ಇದಕ್ಕೆ ತಹಶೀಲ್ದಾರ್‌ ರಶ್ಮಿ ಅವರು ಪ್ರತಿಕ್ರಿಯಿಸಿ, ಎಲ್ಲ ಕುಟುಂಬಗಳಿಗೆ ಜಾಬ್‌ ಕಾರ್ಡ್‌ ನೀಡಲು ಸೂಚಿಸಿದ್ದಾರೆ. ನ್ಯಾಯಬೆಲೆ ಅಂಗಡಿಯಿಂದ ಉಚಿತ ಪಡಿತರ ನೀಡಲು ವ್ಯವಸ್ಥೆ ಮಾಡಲಾಗುವುದು. ಯಾರೂ ಉಪವಾಸ
ಇರದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next