Advertisement

ಉಸ್ತುವಾರಿ ಬಿಟ್ಟುಕೊಡಲು ಸಿದ್ದ

03:27 PM Nov 24, 2021 | Team Udayavani |

ಬಳ್ಳಾರಿ: ನಗರ ಶಾಸಕ ಸೋಮಶೇಖರರೆಡ್ಡಿ ಇಚ್ಛೆಯಂತೆ ವಿಭಜಿತ ಬಳ್ಳಾರಿ ಜಿಲ್ಲಾಉಸ್ತುವಾರಿಯನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡುವಂತೆಸಿಎಂ ಬಸವರಾಜ ಬೊಮ್ಮಾಯಿ ಅವರಿಗೆಈಗಾಗಲೇ ಹೇಳಿದ್ದೇನೆ ಎಂದು ಜಿಲ್ಲಾಉಸ್ತುವಾರಿ, ಪ್ರವಾಸೋದ್ಯಮ ಸಚಿವಆನಂದ್‌ಸಿಂಗ್‌ ಹೇಳಿದರು.

Advertisement

ನಗರದ ಡೀಸಿ ಕಚೇರಿಆವರಣದಲ್ಲಿ ವಿಧಾನಪರಿಷತ್‌ ಚುನಾವಣೆ ನಿಮಿತ್ತಬಿಜೆಪಿ ಅಭ್ಯರ್ಥಿ ಸತೀಶ್‌ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ದೃಷ್ಟಿಯಿಂದಅವಿಭಜಿತ ಬಳ್ಳಾರಿ ಜಿಲ್ಲೆಯನ್ನು ವಿಭಜನೆಮಾಡಲಾಗಿದೆ. ಹೀಗಾಗಿ ಎರಡುಜಿಲ್ಲೆಗಳು, ಇಬ್ಬರು ಜಿಲ್ಲಾ ಧಿಕಾರಿಗಳುಇರುವುದರಿಂದ ಸಹಜವಾಗಿ ಒಂದಷ್ಟುಒತ್ತಡ ಇದ್ದೇ ಇರುತ್ತದೆ.

ಹಾಗಾಗಿ ಬಳ್ಳಾರಿ ಜಿಲ್ಲೆ ಉಸ್ತುವಾರಿ ಬಿಟ್ಟು ಕೊಡಲುಸಿದ್ಧನಿದ್ದು, ಈಗಾಗಲೇ ಸಿಎಂ ಗಮನಕ್ಕೆತಂದಿದ್ದೇನೆ. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಎರಡೂಜಿಲ್ಲೆಗಳ ಉಸ್ತುವಾರಿ ಸಚಿವನಾಗಿ ನನ್ನಕೆಲಸ ನಾನು ಮಾಡುತ್ತಿದ್ದೇನೆ.ಕೇವಲ ಬಳ್ಳಾರಿಗೆ ಬಂದುಸಭೆಗಳನ್ನು ಮಾಡಿದರಷ್ಟೇ ಜಿಲ್ಲೆಅಭಿವೃದ್ಧಿ ಬಗ್ಗೆ ಆಸಕ್ತಿಯಿದೆಎಂದಲ್ಲ.

ಜಿಲ್ಲೆಯ ಸಮಸ್ಯೆಗಳಬಗ್ಗೆ ಅಧಿ ಕಾರಿಗಳೊಂದಿಗೆಸದಾ ಸಂಪರ್ಕದಲ್ಲಿದ್ದೇನೆ.ರಾಜ್ಯಾ ದ್ಯಂತ ಮಳೆಯಾಗಿ ಬೆಳೆ ನಷ್ಟವಾಗಿದೆ. ಸಿಎಂ ವಿಡಿಯೋ ಕಾನ್‌#ರೆನ್ಸ್‌ಮೂಲಕ ಜಿಲ್ಲಾಧಿ ಕಾರಿಗಳಿಗೆ ಅಗತ್ಯಸೂಚನೆಗಳನ್ನು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next