Advertisement

Ballari Crime: ಕ್ಷುಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

11:27 AM Jan 01, 2024 | Team Udayavani |

ಬಳ್ಳಾರಿ: ಕ್ಷುಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬಳ್ಳಾರಿಯಲ್ಲಿ ತಡರಾತ್ರಿ ನಡೆದಿದೆ.

Advertisement

ಸೈದುಲ್ಲ ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಮೂವರ ಪೈಕಿ ಇಬ್ಬರ ಬಂಧನವಾಗಿದೆ.

ಮುಖೇಶ್ ಮತ್ತು ರಾಜೇಶ ಬಂಧನಗೊಳಗಾಗಿದ್ದು, ವೆಂಕಟೇಶ ಎಂಬವರು ನಾಪತ್ತೆಯಾಗಿದ್ದಾರೆ.

ಘಟನೆಯ ವಿವರ: ಮೃತ ಸೈದುಲ್ಲ ಮತ್ತು ಸಹೋದರ ರಾಜ ವಲಿ ಎಂಬವರು ಕೇಕ್ ತರಲು ಬೇಕರಿ ಗೆ ತೆರಳಿದ್ದರು. ಅದೇ ಬೇಕರಿ ಬದಿಯಲ್ಲಿ ಆರೋಪಿಗಳಾದ  ಮುಖೇಶ್, ರಾಜೇಶ ಮತ್ತು ವೆಂಕಟೇಶ ಕುಡಿದು ಮಲಗಿದ್ದರು. ಇವರುಗಳನ್ನು ಸೈಡಿಗೆ ಸರಿಯಲು ಹೇಳಿದ್ದಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next