Advertisement

Ballari; ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ದಾಳಿ: ಇಬ್ಬರಿಗೆ ತೀವ್ರ ಗಾಯ

11:07 PM Mar 29, 2024 | Team Udayavani |

ಬಳ್ಳಾರಿ: ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳು ದಾಳಿ ನಡೆಸಿ ಇಬ್ಬರಿಗೆ ತೀವ್ರ ಗಾಯಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಹಲಕುಂದಿ ಗ್ರಾಮದ ಅರಣ್ಯ ಪ್ರದೇಶದ ಅಂಚಿನಲ್ಲಿರುವ ತೋಟದ ಕೆಲಸಕ್ಕೆ ತೆರಳಿದ ಗ್ರಾಮದ ನಿವಾಸಿ ಕೃಷ್ಣ ನಾಯಕ ಎಂಬುವವರ ಮೇಲೆ ಕರಡಿ ದಾಳಿ ನಡೆಸಿ ಕೈಗೆ ಗಾಯಗೊಳಿಸಿದೆ. ಮತ್ತೊಂದಡೆ ಹಲಕುಂದಿ ಗ್ರಾಮದ ಮಠದ ಬಳಿ ಮೊಳಕಲ್ಮೂರು ನಿವಾಸಿಯಾಗಿರುವ ಪ್ರಸನ್ನ ಕುಮಾರ ಎಂಬುವವರ ಮೇಲೆ ಮೂರ್ನಾಲ್ಕು ಕರಡಿಗಳು ದಾಳಿ ಮಾಡಿ ಮುಖ ಸೇರಿದಂತೆ ದೇಹದ ನಾನಾ ಭಾಗಗಳಿಗೆ ತೀವ್ರವಾಗಿ ಗಾಯಗೊಳಿಸಿದೆ. ಕರಡಿ ದಾಳಿಯಿಂದ ಗಾಯಗೊಂಡವರನ್ನು ನಗರದ ವಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next